ಕೋಯಿಕ್ಕೋಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಸ್ತದ ಮುಖ್ಯಸ್ಥ ಜಿಫ್ರಿ ಮುತ್ತುಕೋಯ ತಂಗಲ್, ‘ಪ್ರತಿ ರಾಜಕೀಯ ಪಕ್ಷವು ಅವರ ರಾಜಕೀಯ ನೀತಿಗೆ ಅನುಗುಣವಾಗಿ ಆಹ್ವಾನವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ರಾಮಮಂದಿರ ಉದ್ಘಾಟನೆಯಲ್ಲಿ ಯಾರು ಭಾಗವಹಿಸಿದರೂ ಅದು ಕಾಂಗ್ರೆಸ್ ಆಗಿದ್ದರೂ ಸಹ ಸಮುದಾಯದ ಭಾವನೆಗಳಿಗೆ ಯಾವುದೇ ಧಕ್ಕೆಯಾಗದು. ನಾವು ನಮ್ಮ ಸಮುದಾಯದ ಭಾವನೆಗಳ ಬಗ್ಗೆ ಕಾಳಜಿ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.