‘ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಒತ್ತಡ ನಿವಾರಿಸಿಕೊಳ್ಳಲು ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಚೆಸ್ ಹಾಗೂ ಲೂಡೊ ಬೋರ್ಡ್, ಪ್ಲೇಯಿಂಗ್ ಕಾರ್ಡ್ ನೀಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ’ ಎಂದು ಸ್ಥಳದಲ್ಲಿರುವ ಮಾನಸಿಕ ರೋಗ ತಜ್ಞರಲ್ಲಿ ಒಬ್ಬರಾದ ಡಾ. ರೋಹಿತ್ ಗೊಂಡ್ವಾಲ್ ಹೇಳಿದ್ದಾರೆ.
ಸುರಂಗದೊಳಗೆ ಸಿಲುಕಿರುವ 41 ನೌಕರರು ಆರೋಗ್ಯವಾಗಿದ್ದು, ಅವರು ಮಾನಸಿಕವಾಗಿಯೂ ಸದೃಢವಾಗಿರಬೇಕಿದೆ. ಒತ್ತಡ ನಿವಾರಣೆಗೆ ಅವರು ಅಲ್ಲಿ ಕಳ್ಳ ಪೊಲೀಸ್ ಆಟವಾಡುತ್ತಿದ್ದಾರೆ. ಯೋಗ, ವ್ಯಾಯಾಮ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ ಎಂದು ಗೊಂಡ್ವಾಲ್ ತಿಳಿಸಿದ್ದಾರೆ.