<p><strong>ಹೇಗ್:</strong> ‘ಕುಲಭೂಷಣ್ ಜಾಧವ್ ಅವರ ವಿಚಾರಣೆ ನಡೆಸಿದ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಇಡೀ ಪ್ರಕ್ರಿಯೆಯ ಕನಿಷ್ಠ ಮಾನದಂಡಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ವಿಚಾರಣೆ, ಶಿಕ್ಷೆ ನೀಡಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ಜಾಧವ್ ಅವರನ್ನು ತಕ್ಷಣ ಬಿಡುಗಡೆಗೊಳಿಸಲು ಆದೇಶಿಸಬೇಕು’ ಎಂಬುದಾಗಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ(ಐಸಿಜೆ) ಮನವಿ ಮಾಡಿಕೊಂಡಿದೆ.</p>.<p>ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು ಐಸಿಜೆ ಸೋಮವಾರದಿಂದವಿಚಾರಣೆಗೆ ಕೈಗೆತ್ತಿಕೊಂಡಿದೆ.</p>.<p>ನಾಲ್ಕು ದಿನ ವಿಚಾರಣೆ ನಡೆಯಲಿದ್ದು, ಮೊದಲು ಎರಡು ದಿನ ಭಾರತ ಮತ್ತು ಪಾಕಿಸ್ತಾನ ವಾದ ಮಂಡಿಸಲಿವೆ. ನಂತರ ಎರಡನೇ ಸುತ್ತಿನಲ್ಲಿ ಉಭಯ ರಾಷ್ಟ್ರಗಳಪ್ರತಿಕ್ರಿಯೆಗಳನ್ನು ನ್ಯಾಯಾಲಯ ಆಲಿಸಲಿದೆ.</p>.<p>‘ಜಾಧವ್ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಮರ್ಥ ಸಾಕ್ಷ್ಯ ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಅಲ್ಲದೆ, ಜಾಧವ್ ಅವರನ್ನು ಬಲವಂತದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ’ ಎಂದು ಭಾರತದ ಪರ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ ಹೇಳಿದರು.</p>.<p>‘ಜಾಧವ್ ಅವರ ತಪ್ಪೊಪ್ಪಿಗೆ ದಾಖಲೆಗಳನ್ನು ಪ್ರಚಾರದ ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂದೂ ಅವರು ಹೇಳಿದರು.</p>.<p>ಇರಾನ್ನಿಂದ ವಿವಾದಿತ ಬಲೂಚಿಸ್ತಾನ ಪ್ರಾಂತ್ಯಪ್ರವೇಶಿಸುವಸಂದರ್ಭದಲ್ಲಿ, 2016ರ ಮಾರ್ಚ್ 3ರಂದು ಭದ್ರತಾ ಪಡೆಗಳುಜಾಧವ್ ಅವರನ್ನು ಬಂಧಿಸಿದವು ಎಂದು ಪಾಕಿಸ್ತಾನ ಹೇಳಿದೆ.</p>.<p>ನೌಕಾಪಡೆಯಿಂದ ನಿವೃತ್ತರಾದ ನಂತರ, ಇರಾನ್ನಲ್ಲಿವ್ಯಾಪಾರ ಚಟುವಟಿಕೆ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು ಎಂದು ಭಾರತ ಪ್ರತಿಕ್ರಿಯಿಸಿದೆ.</p>.<p>‘2016ರ ಏಪ್ರಿಲ್ನಲ್ಲಿ ಜಾಧವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2016ರ ಮೇನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಈ ಬಗ್ಗೆ ಭಾರತಕ್ಕೆ ಮಾಹಿತಿ ನೀಡದೆ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ಭಾರತ ಆರೋಪಿಸಿದೆ.</p>.<p><strong>‘ಪಾಕಿಸ್ತಾನ ಸೇನಾ ನ್ಯಾಯಾಧೀಶರು ಕಾನೂನು ಪದವಿಯನ್ನೇ ಪಡೆದಿಲ್ಲ’</strong><br />‘ಪಾಕಿಸ್ತಾನದ ಸೇನಾ ನ್ಯಾಯಾಲಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿಲ್ಲ. ಕುಲಭೂಷಣ್ ಜಾಧವ್ ಅವರ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಅಥವಾ ಕಾನೂನು ತರಬೇತಿ ಪಡೆದಿಲ್ಲ. ಅಷ್ಟು ಮಾತ್ರವಲ್ಲ, ಕಾನೂನು ಪದವಿಯನ್ನೇ ಪಡೆದಿಲ್ಲ’ ಎಂದು ಭಾರತವು ಐಸಿಜೆಯ ಗಮನಕ್ಕೆ ತಂದಿತು.</p>.<p>‘ಪಾಕಿಸ್ತಾನ ಸೇನಾ ನ್ಯಾಯಾಲಯವು ‘ಅಪಾರದರ್ಶಕ ಅಥವಾ ಅಸಮರ್ಪಕ ಪ್ರಕ್ರಿಯೆ’ಯ ಮೂಲಕ ಎರಡು ವರ್ಷಗಳಲ್ಲಿ 161 ನಾಗರಿಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ’ ಎಂದು ಭಾರತ ಹೇಳಿತು.</p>.<p><strong>ಪಾಕ್ ಪರ ನ್ಯಾಯಾಧೀಶರಿಗೆ ಹೃದಯಾಘಾತ</strong><br />ಐಸಿಜೆಯಲ್ಲಿಜಾಧವ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ, ಪಾಕಿಸ್ತಾನ ಪರ ನ್ಯಾಯಾಧೀಶ ತಸ್ಸಾದುಕ್ ಹುಸೇನ್ ಗಿಲಾನಿ (69) ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತುಎಂದುಮಾಧ್ಯಮಗಳುವರದಿಮಾಡಿವೆ.</p>.<p>ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p>*<br />ಪಾಕಿಸ್ತಾನವು ಜಾಧವ್ ಪ್ರಕರಣದಲ್ಲಿ ಕಥೆ ಹೇಳುತ್ತಿದೆ. ವಸ್ತುನಿಷ್ಠ ಅಂಶಗಳ ಆಧಾರದ ಮೇಲೆ ವಾದಿಸುತ್ತಿಲ್ಲ. ಸಮರ್ಥ ಸಾಕ್ಷ್ಯಾಧಾರಗಳನ್ನೂ ಅದು ಒದಗಿಸಿಲ್ಲ.<br /><em><strong>-ಹರೀಶ್ ಸಾಳ್ವೆ,ಭಾರತದ ಪರ ವಕೀಲ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೇಗ್:</strong> ‘ಕುಲಭೂಷಣ್ ಜಾಧವ್ ಅವರ ವಿಚಾರಣೆ ನಡೆಸಿದ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಇಡೀ ಪ್ರಕ್ರಿಯೆಯ ಕನಿಷ್ಠ ಮಾನದಂಡಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ವಿಚಾರಣೆ, ಶಿಕ್ಷೆ ನೀಡಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ಜಾಧವ್ ಅವರನ್ನು ತಕ್ಷಣ ಬಿಡುಗಡೆಗೊಳಿಸಲು ಆದೇಶಿಸಬೇಕು’ ಎಂಬುದಾಗಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ(ಐಸಿಜೆ) ಮನವಿ ಮಾಡಿಕೊಂಡಿದೆ.</p>.<p>ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು ಐಸಿಜೆ ಸೋಮವಾರದಿಂದವಿಚಾರಣೆಗೆ ಕೈಗೆತ್ತಿಕೊಂಡಿದೆ.</p>.<p>ನಾಲ್ಕು ದಿನ ವಿಚಾರಣೆ ನಡೆಯಲಿದ್ದು, ಮೊದಲು ಎರಡು ದಿನ ಭಾರತ ಮತ್ತು ಪಾಕಿಸ್ತಾನ ವಾದ ಮಂಡಿಸಲಿವೆ. ನಂತರ ಎರಡನೇ ಸುತ್ತಿನಲ್ಲಿ ಉಭಯ ರಾಷ್ಟ್ರಗಳಪ್ರತಿಕ್ರಿಯೆಗಳನ್ನು ನ್ಯಾಯಾಲಯ ಆಲಿಸಲಿದೆ.</p>.<p>‘ಜಾಧವ್ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಮರ್ಥ ಸಾಕ್ಷ್ಯ ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಅಲ್ಲದೆ, ಜಾಧವ್ ಅವರನ್ನು ಬಲವಂತದಿಂದ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ’ ಎಂದು ಭಾರತದ ಪರ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ ಹೇಳಿದರು.</p>.<p>‘ಜಾಧವ್ ಅವರ ತಪ್ಪೊಪ್ಪಿಗೆ ದಾಖಲೆಗಳನ್ನು ಪ್ರಚಾರದ ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂದೂ ಅವರು ಹೇಳಿದರು.</p>.<p>ಇರಾನ್ನಿಂದ ವಿವಾದಿತ ಬಲೂಚಿಸ್ತಾನ ಪ್ರಾಂತ್ಯಪ್ರವೇಶಿಸುವಸಂದರ್ಭದಲ್ಲಿ, 2016ರ ಮಾರ್ಚ್ 3ರಂದು ಭದ್ರತಾ ಪಡೆಗಳುಜಾಧವ್ ಅವರನ್ನು ಬಂಧಿಸಿದವು ಎಂದು ಪಾಕಿಸ್ತಾನ ಹೇಳಿದೆ.</p>.<p>ನೌಕಾಪಡೆಯಿಂದ ನಿವೃತ್ತರಾದ ನಂತರ, ಇರಾನ್ನಲ್ಲಿವ್ಯಾಪಾರ ಚಟುವಟಿಕೆ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು ಎಂದು ಭಾರತ ಪ್ರತಿಕ್ರಿಯಿಸಿದೆ.</p>.<p>‘2016ರ ಏಪ್ರಿಲ್ನಲ್ಲಿ ಜಾಧವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2016ರ ಮೇನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಈ ಬಗ್ಗೆ ಭಾರತಕ್ಕೆ ಮಾಹಿತಿ ನೀಡದೆ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ಭಾರತ ಆರೋಪಿಸಿದೆ.</p>.<p><strong>‘ಪಾಕಿಸ್ತಾನ ಸೇನಾ ನ್ಯಾಯಾಧೀಶರು ಕಾನೂನು ಪದವಿಯನ್ನೇ ಪಡೆದಿಲ್ಲ’</strong><br />‘ಪಾಕಿಸ್ತಾನದ ಸೇನಾ ನ್ಯಾಯಾಲಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿಲ್ಲ. ಕುಲಭೂಷಣ್ ಜಾಧವ್ ಅವರ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಅಥವಾ ಕಾನೂನು ತರಬೇತಿ ಪಡೆದಿಲ್ಲ. ಅಷ್ಟು ಮಾತ್ರವಲ್ಲ, ಕಾನೂನು ಪದವಿಯನ್ನೇ ಪಡೆದಿಲ್ಲ’ ಎಂದು ಭಾರತವು ಐಸಿಜೆಯ ಗಮನಕ್ಕೆ ತಂದಿತು.</p>.<p>‘ಪಾಕಿಸ್ತಾನ ಸೇನಾ ನ್ಯಾಯಾಲಯವು ‘ಅಪಾರದರ್ಶಕ ಅಥವಾ ಅಸಮರ್ಪಕ ಪ್ರಕ್ರಿಯೆ’ಯ ಮೂಲಕ ಎರಡು ವರ್ಷಗಳಲ್ಲಿ 161 ನಾಗರಿಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ’ ಎಂದು ಭಾರತ ಹೇಳಿತು.</p>.<p><strong>ಪಾಕ್ ಪರ ನ್ಯಾಯಾಧೀಶರಿಗೆ ಹೃದಯಾಘಾತ</strong><br />ಐಸಿಜೆಯಲ್ಲಿಜಾಧವ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ, ಪಾಕಿಸ್ತಾನ ಪರ ನ್ಯಾಯಾಧೀಶ ತಸ್ಸಾದುಕ್ ಹುಸೇನ್ ಗಿಲಾನಿ (69) ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತುಎಂದುಮಾಧ್ಯಮಗಳುವರದಿಮಾಡಿವೆ.</p>.<p>ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p>*<br />ಪಾಕಿಸ್ತಾನವು ಜಾಧವ್ ಪ್ರಕರಣದಲ್ಲಿ ಕಥೆ ಹೇಳುತ್ತಿದೆ. ವಸ್ತುನಿಷ್ಠ ಅಂಶಗಳ ಆಧಾರದ ಮೇಲೆ ವಾದಿಸುತ್ತಿಲ್ಲ. ಸಮರ್ಥ ಸಾಕ್ಷ್ಯಾಧಾರಗಳನ್ನೂ ಅದು ಒದಗಿಸಿಲ್ಲ.<br /><em><strong>-ಹರೀಶ್ ಸಾಳ್ವೆ,ಭಾರತದ ಪರ ವಕೀಲ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>