<p>ಲಖನೌ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿರುವ ಶೈತ್ಯಾಗಾರದ ಚಾವಣಿ ಕುಸಿದ ಪರಿಣಾಮ 14 ಮಂದಿ ಮೃತಪಟ್ಟು, ಇತರ 11 ಜನರು ಗಾಯಗೊಂಡಿದ್ದಾರೆ.</p>.<p>ಮೃತರ ಪೈಕಿ ಬಹುತೇಕ ಜನರು ಕಾರ್ಮಿಕರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತ ಗುರುವಾರ ಸಂಜೆಯೇ ಸಂಭವಿಸಿದ್ದರೂ, ಅವಶೇಷಗಳಡಿಯಿಂದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಶುಕ್ರವಾರ ರಾತ್ರಿ ಹೊರತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣಕ್ಕೆ ಸಂಬಂಧಿಸಿ ಶೈತ್ಯಾಗಾರದ ಮಾಲೀಕರಾದ ಅಂಕುರ್ ಅಗರವಾಲ್ ಹಾಗೂ ರೋಹಿತ್ ಅಗರವಾಲ್ ಎಂಬುವವರನ್ನು ಉತ್ತರಾಖಂಡದ ಹಲ್ದವಾನಿ ಪಟ್ಟಣದಲ್ಲಿ ಶನಿವಾರ ಬಂಧಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘25 ಜನರು ಆಲೂಗಡ್ಡೆ ಚೀಲಗಳನ್ನು ಶೈತ್ಯಾಗಾರದಲ್ಲಿ ಜೋಡಿಸಿಡುತ್ತಿದ್ದರು. ಈ ವೇಳೆ ಚಾವಣಿ ಹಠಾತ್ತನೇ ಕುಸಿಯಿತು. ಚಾವಣಿ ಅವಶೇಷಗಳಲ್ಲದೇ, ಆಲೂಗಡ್ಡೆ ಚೀಲಗಳು ಅವರ ಮೇಲೆ ಬಿದ್ದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಖನೌ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿರುವ ಶೈತ್ಯಾಗಾರದ ಚಾವಣಿ ಕುಸಿದ ಪರಿಣಾಮ 14 ಮಂದಿ ಮೃತಪಟ್ಟು, ಇತರ 11 ಜನರು ಗಾಯಗೊಂಡಿದ್ದಾರೆ.</p>.<p>ಮೃತರ ಪೈಕಿ ಬಹುತೇಕ ಜನರು ಕಾರ್ಮಿಕರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತ ಗುರುವಾರ ಸಂಜೆಯೇ ಸಂಭವಿಸಿದ್ದರೂ, ಅವಶೇಷಗಳಡಿಯಿಂದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಶುಕ್ರವಾರ ರಾತ್ರಿ ಹೊರತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣಕ್ಕೆ ಸಂಬಂಧಿಸಿ ಶೈತ್ಯಾಗಾರದ ಮಾಲೀಕರಾದ ಅಂಕುರ್ ಅಗರವಾಲ್ ಹಾಗೂ ರೋಹಿತ್ ಅಗರವಾಲ್ ಎಂಬುವವರನ್ನು ಉತ್ತರಾಖಂಡದ ಹಲ್ದವಾನಿ ಪಟ್ಟಣದಲ್ಲಿ ಶನಿವಾರ ಬಂಧಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘25 ಜನರು ಆಲೂಗಡ್ಡೆ ಚೀಲಗಳನ್ನು ಶೈತ್ಯಾಗಾರದಲ್ಲಿ ಜೋಡಿಸಿಡುತ್ತಿದ್ದರು. ಈ ವೇಳೆ ಚಾವಣಿ ಹಠಾತ್ತನೇ ಕುಸಿಯಿತು. ಚಾವಣಿ ಅವಶೇಷಗಳಲ್ಲದೇ, ಆಲೂಗಡ್ಡೆ ಚೀಲಗಳು ಅವರ ಮೇಲೆ ಬಿದ್ದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>