<p><strong>ನವದೆಹಲಿ: </strong>ಕೋವಿಡ್–19 ಪಿಡುಗು, ಲಾಕ್ಡೌನ್ ಜನರ ಜೀವನದ ಎಲ್ಲ ಸ್ತರದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಮಕ್ಕಳೂ ಹೊರತಾಗಿಲ್ಲ.</p>.<p>ಈ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ನಡೆದಿದ್ದು, ಸಂಕಷ್ಟದಲ್ಲಿದ್ದ 1,675 ಮಕ್ಕಳನ್ನ ರಕ್ಷಿಸಲಾಗಿದೆ ಎಂದು ನೊಬೆಲ್ ಪುರಸ್ಕಾರ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ನೇತೃತ್ವದ ಬಚಪನ್ ಬಚಾವೊ ಆಂದೋಲನ (ಬಿಬಿಎ) ಹೇಳಿದೆ.</p>.<p>ಲಾಕ್ಡೌನ್ನಿಂದಾಗಿ ಸಾಕಷ್ಟು ಸಂಖ್ಯೆಯ ಪಾಲಕರು ಉದ್ಯೋಗ ಕಳೆದುಕೊಂಡು, ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಈ ಕಾರಣದಿಂದಲೂ ಮಕ್ಕಳ ಕಳ್ಳಸಾಗಣೆ, ಅವರ ಶೋಷಣೆಯಂಥ ಪ್ರಕರಣಗಳು ಹೆಚ್ಚಿವೆ ಎಂದೂ ಸಂಸ್ಥೆ ಹೇಳಿದೆ.</p>.<p>‘ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಕೆಲವರು ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸಿದರು. ಇನ್ನೊಂದೆಡೆ, ಈ ಬೆಳವಣಿಗೆ ಉತ್ತಮ ಜೀವನೋಪಾಯದ ಭರವಸೆ ನೀಡಿ ಮಕ್ಕಳ ಮಾರಾಟ, ಕಳ್ಳಸಾಗಣೆಯಂತಹ ಪ್ರಕರಣಗಳು ಹೆಚ್ಚುವಂತೆ ಮಾಡಿತು’ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಧನಂಜಯ್ ಟಿಂಗಲ್ ಹೇಳಿದರು.</p>.<p>ಬಿಹಾರದ ಗ್ರಾಮವೊಂದರ ನಿವಾಸಿ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬ 13 ವರ್ಷದ ಬಾಲಕನನ್ನು ಸಂಸ್ಥೆ ರಕ್ಷಿಸಿದೆ. ಈ ಬಾಲಕ ಗುಜರಾತ್ನ ಗಾಂಧಿನಗರದ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗಿತ್ತು ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.</p>.<p>‘ಕೃಷ್ಣನ ಜೊತೆಗೆ ಇತರ 6 ಜನ ಬಾಲಕರೂ ದುಡಿಯುತ್ತಿದ್ದರು. ಅವರಿಗೆ ವಾರಕ್ಕೆ ಅರ್ಧ ದಿನ ಮಾತ್ರ ವಿಶ್ರಾಂತಿ ನೀಡಲಾಗುತ್ತಿತ್ತು. ಒಳ್ಳೆಯ ವೇತನ ನೀಡುವ ಭರವಸೆ ನೀಡಲಾಗಿದ್ದರೂ, ಅವರಿಗೆ ಅಷ್ಟು ವೇತನ ನೀಡಲೇ ಇಲ್ಲ. ಉತ್ಪಾದನೆಯ ಗುರಿ ತಲುಪಬೇಕು ಎಂಬ ಕಾರಣಕ್ಕೆ ಈ ಬಾಲಕರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾಗಿತ್ತು’ ಎಂದೂ ವಿವರಿಸಿದರು.</p>.<p>‘ಇನ್ನೊಂದೆಡೆ, ಕೃಷ್ಣನ ಪಾಲಕರು ಮನೆಯ ಚಾವಣಿ ದುರಸ್ತಿಗಾಗಿ ಲಾಕ್ಡೌನ್ಗಿಂತಲೂ ಮೊದಲು ₹ 20,000 ಸಾಲ ಪಡೆದಿದ್ದರು. ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡಿದ್ದ ಅವರು ಸಾಲ ತೀರಿಸಲಾಗದೇ ಸಂಕಷ್ಟದಲ್ಲಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕಳ್ಳಸಾಗಣೆಯಲ್ಲಿ ನಿರತರು, ಪಾಲಕರಿಗೆ ₹ 20,000 ನೀಡಿ ಕೃಷ್ಣನನ್ನು ಗುಜರಾತ್ಗೆ ಕರೆದುಕೊಂಡು ಹೋದರು’ ಎಂದು ಹೇಳಿದರು.</p>.<p>‘ಬಳೆಗಳನ್ನು ತಯಾರಿಸುವ ಘಟಕಗಳು ಜೈಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಈ ಘಟಕಗಳಲ್ಲಿ ದುಡಿಯುವ ಬಾಲಕಾರ್ಮಿಕರ ಸಂಖ್ಯೆಯೂ ಅಧಿಕ. ಇವುಗಳ ಮೇಲೆ ನಿಗಾ ಇಡಲಾಗಿದೆ’ ಎಂದರು.</p>.<p>‘ಬಾಲ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತದೆ. ಅಲ್ಲದೇ, ಬಳೆಗಳನ್ನು ತಯಾರಿಸುವ ಸಂದರ್ಭದಲ್ಲಿ ಅವುಗಳ ಮೇಲ್ಮೈಯಲ್ಲಿ ಅಲಂಕಾರ ಮಾಡುವ ನಾಜೂಕಿನ ಕೆಲಸ ಮಾಡಲು ಮಕ್ಕಳ ಕೈಗಳೇ ಹೆಚ್ಚು ಅನುಕೂಲ. ಹೀಗಾಗಿ ಈ ಉದ್ದಿಮೆಯಲ್ಲಿ ಬಾಲಕಾರ್ಮಿಕ ಸಂಖ್ಯೆ ಹೆಚ್ಚು’ ಎಂದು ಧನಂಜಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೋವಿಡ್–19 ಪಿಡುಗು, ಲಾಕ್ಡೌನ್ ಜನರ ಜೀವನದ ಎಲ್ಲ ಸ್ತರದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಮಕ್ಕಳೂ ಹೊರತಾಗಿಲ್ಲ.</p>.<p>ಈ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ನಡೆದಿದ್ದು, ಸಂಕಷ್ಟದಲ್ಲಿದ್ದ 1,675 ಮಕ್ಕಳನ್ನ ರಕ್ಷಿಸಲಾಗಿದೆ ಎಂದು ನೊಬೆಲ್ ಪುರಸ್ಕಾರ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ನೇತೃತ್ವದ ಬಚಪನ್ ಬಚಾವೊ ಆಂದೋಲನ (ಬಿಬಿಎ) ಹೇಳಿದೆ.</p>.<p>ಲಾಕ್ಡೌನ್ನಿಂದಾಗಿ ಸಾಕಷ್ಟು ಸಂಖ್ಯೆಯ ಪಾಲಕರು ಉದ್ಯೋಗ ಕಳೆದುಕೊಂಡು, ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಈ ಕಾರಣದಿಂದಲೂ ಮಕ್ಕಳ ಕಳ್ಳಸಾಗಣೆ, ಅವರ ಶೋಷಣೆಯಂಥ ಪ್ರಕರಣಗಳು ಹೆಚ್ಚಿವೆ ಎಂದೂ ಸಂಸ್ಥೆ ಹೇಳಿದೆ.</p>.<p>‘ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಕೆಲವರು ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸಿದರು. ಇನ್ನೊಂದೆಡೆ, ಈ ಬೆಳವಣಿಗೆ ಉತ್ತಮ ಜೀವನೋಪಾಯದ ಭರವಸೆ ನೀಡಿ ಮಕ್ಕಳ ಮಾರಾಟ, ಕಳ್ಳಸಾಗಣೆಯಂತಹ ಪ್ರಕರಣಗಳು ಹೆಚ್ಚುವಂತೆ ಮಾಡಿತು’ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಧನಂಜಯ್ ಟಿಂಗಲ್ ಹೇಳಿದರು.</p>.<p>ಬಿಹಾರದ ಗ್ರಾಮವೊಂದರ ನಿವಾಸಿ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬ 13 ವರ್ಷದ ಬಾಲಕನನ್ನು ಸಂಸ್ಥೆ ರಕ್ಷಿಸಿದೆ. ಈ ಬಾಲಕ ಗುಜರಾತ್ನ ಗಾಂಧಿನಗರದ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗಿತ್ತು ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.</p>.<p>‘ಕೃಷ್ಣನ ಜೊತೆಗೆ ಇತರ 6 ಜನ ಬಾಲಕರೂ ದುಡಿಯುತ್ತಿದ್ದರು. ಅವರಿಗೆ ವಾರಕ್ಕೆ ಅರ್ಧ ದಿನ ಮಾತ್ರ ವಿಶ್ರಾಂತಿ ನೀಡಲಾಗುತ್ತಿತ್ತು. ಒಳ್ಳೆಯ ವೇತನ ನೀಡುವ ಭರವಸೆ ನೀಡಲಾಗಿದ್ದರೂ, ಅವರಿಗೆ ಅಷ್ಟು ವೇತನ ನೀಡಲೇ ಇಲ್ಲ. ಉತ್ಪಾದನೆಯ ಗುರಿ ತಲುಪಬೇಕು ಎಂಬ ಕಾರಣಕ್ಕೆ ಈ ಬಾಲಕರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾಗಿತ್ತು’ ಎಂದೂ ವಿವರಿಸಿದರು.</p>.<p>‘ಇನ್ನೊಂದೆಡೆ, ಕೃಷ್ಣನ ಪಾಲಕರು ಮನೆಯ ಚಾವಣಿ ದುರಸ್ತಿಗಾಗಿ ಲಾಕ್ಡೌನ್ಗಿಂತಲೂ ಮೊದಲು ₹ 20,000 ಸಾಲ ಪಡೆದಿದ್ದರು. ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡಿದ್ದ ಅವರು ಸಾಲ ತೀರಿಸಲಾಗದೇ ಸಂಕಷ್ಟದಲ್ಲಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕಳ್ಳಸಾಗಣೆಯಲ್ಲಿ ನಿರತರು, ಪಾಲಕರಿಗೆ ₹ 20,000 ನೀಡಿ ಕೃಷ್ಣನನ್ನು ಗುಜರಾತ್ಗೆ ಕರೆದುಕೊಂಡು ಹೋದರು’ ಎಂದು ಹೇಳಿದರು.</p>.<p>‘ಬಳೆಗಳನ್ನು ತಯಾರಿಸುವ ಘಟಕಗಳು ಜೈಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಈ ಘಟಕಗಳಲ್ಲಿ ದುಡಿಯುವ ಬಾಲಕಾರ್ಮಿಕರ ಸಂಖ್ಯೆಯೂ ಅಧಿಕ. ಇವುಗಳ ಮೇಲೆ ನಿಗಾ ಇಡಲಾಗಿದೆ’ ಎಂದರು.</p>.<p>‘ಬಾಲ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತದೆ. ಅಲ್ಲದೇ, ಬಳೆಗಳನ್ನು ತಯಾರಿಸುವ ಸಂದರ್ಭದಲ್ಲಿ ಅವುಗಳ ಮೇಲ್ಮೈಯಲ್ಲಿ ಅಲಂಕಾರ ಮಾಡುವ ನಾಜೂಕಿನ ಕೆಲಸ ಮಾಡಲು ಮಕ್ಕಳ ಕೈಗಳೇ ಹೆಚ್ಚು ಅನುಕೂಲ. ಹೀಗಾಗಿ ಈ ಉದ್ದಿಮೆಯಲ್ಲಿ ಬಾಲಕಾರ್ಮಿಕ ಸಂಖ್ಯೆ ಹೆಚ್ಚು’ ಎಂದು ಧನಂಜಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>