<p><strong>ಗೋಪೇಶ್ವರ:</strong> ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ತ್ರಿಶೂಲ್ ಶಿಖರವನ್ನು ಏರಲು ಮುಂದಾದಾಗ ಉಂಟಾದ ಹಿಮಪಾತದಲ್ಲಿ ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ಮತ್ತು ಸಹಾಯಕ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಕಾಣೆಯಾದವರನ್ನು ಹುಡುಕಲು ಉತ್ತರಕಾಶಿ ಮೂಲದ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೈನರಿಂಗ್ನ ಪ್ರಾಂಶುಪಾಲ ಕರ್ನಲ್ ಅಮಿತ್ ಬಿಶ್ತ್ ನೇತೃತ್ವದ ರಕ್ಷಣಾ ತಂಡವು ಹಿಮಪಾತ ಪೀಡಿತ ಪ್ರದೇಶಕ್ಕೆ ತೆರಳಿದೆ ಎಂದು ಎನ್ಐಎಂನ (ನೌಕಾಪಡೆಯ ಮಾಹಿತಿ ನಿರ್ವಹಣಾ ವಿಭಾಗ) ಹೇಳಿಕೆಯಲ್ಲಿ ಹೇಳಲಾಗಿದೆ.</p>.<p>ರಕ್ಷಕರ ತಂಡವು ಜೋಶಿಮಠವನ್ನು ತಲುಪಿದೆ ಆದರೆ ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p>.<p>ಭಾರತೀಯ ಸೇನೆ, ವಾಯುಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಂಯೋಜಿತ ತಂಡವು ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅದು ಹೇಳಿದೆ.</p>.<p>ತ್ರಿಶೂಲ್ ಶಿಖರವು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಮೂರು ಹಿಮಾಲಯ ಶಿಖರಗಳ ಒಂದು ಗುಂಪು.</p>.<p>ಭಾರತೀಯ ನೌಕಾಪಡೆಯ ಸಾಹಸ ವಿಭಾಗವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಎನ್ಐಎಂ ಅಧಿಕಾರಿಗಳಿಗೆ ಮಾಹಿತಿ ನೀಡಿತು ಮತ್ತು ಸಂಸ್ಥೆಯ ಶೋಧ ಮತ್ತು ರಕ್ಷಣಾ ತಂಡದ ಸಹಾಯವನ್ನು ಕೋರಿತು.</p>.<p>ಲಭ್ಯವಿರುವ ಮಾಹಿತಿ ಪ್ರಕಾರ, ಭಾರತೀಯ ನೌಕಾಪಡೆಯ 20 ಸದಸ್ಯರ ತಂಡವು 15 ದಿನಗಳ ಹಿಂದೆ 7,120 ಮೀಟರ್ ಎತ್ತರದ ತ್ರಿಶೂಲ್ ಪರ್ವತಕ್ಕೆ ಆರೋಹಣ ಕೈಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಪೇಶ್ವರ:</strong> ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ತ್ರಿಶೂಲ್ ಶಿಖರವನ್ನು ಏರಲು ಮುಂದಾದಾಗ ಉಂಟಾದ ಹಿಮಪಾತದಲ್ಲಿ ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ಮತ್ತು ಸಹಾಯಕ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಕಾಣೆಯಾದವರನ್ನು ಹುಡುಕಲು ಉತ್ತರಕಾಶಿ ಮೂಲದ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೈನರಿಂಗ್ನ ಪ್ರಾಂಶುಪಾಲ ಕರ್ನಲ್ ಅಮಿತ್ ಬಿಶ್ತ್ ನೇತೃತ್ವದ ರಕ್ಷಣಾ ತಂಡವು ಹಿಮಪಾತ ಪೀಡಿತ ಪ್ರದೇಶಕ್ಕೆ ತೆರಳಿದೆ ಎಂದು ಎನ್ಐಎಂನ (ನೌಕಾಪಡೆಯ ಮಾಹಿತಿ ನಿರ್ವಹಣಾ ವಿಭಾಗ) ಹೇಳಿಕೆಯಲ್ಲಿ ಹೇಳಲಾಗಿದೆ.</p>.<p>ರಕ್ಷಕರ ತಂಡವು ಜೋಶಿಮಠವನ್ನು ತಲುಪಿದೆ ಆದರೆ ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p>.<p>ಭಾರತೀಯ ಸೇನೆ, ವಾಯುಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಂಯೋಜಿತ ತಂಡವು ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅದು ಹೇಳಿದೆ.</p>.<p>ತ್ರಿಶೂಲ್ ಶಿಖರವು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಮೂರು ಹಿಮಾಲಯ ಶಿಖರಗಳ ಒಂದು ಗುಂಪು.</p>.<p>ಭಾರತೀಯ ನೌಕಾಪಡೆಯ ಸಾಹಸ ವಿಭಾಗವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಎನ್ಐಎಂ ಅಧಿಕಾರಿಗಳಿಗೆ ಮಾಹಿತಿ ನೀಡಿತು ಮತ್ತು ಸಂಸ್ಥೆಯ ಶೋಧ ಮತ್ತು ರಕ್ಷಣಾ ತಂಡದ ಸಹಾಯವನ್ನು ಕೋರಿತು.</p>.<p>ಲಭ್ಯವಿರುವ ಮಾಹಿತಿ ಪ್ರಕಾರ, ಭಾರತೀಯ ನೌಕಾಪಡೆಯ 20 ಸದಸ್ಯರ ತಂಡವು 15 ದಿನಗಳ ಹಿಂದೆ 7,120 ಮೀಟರ್ ಎತ್ತರದ ತ್ರಿಶೂಲ್ ಪರ್ವತಕ್ಕೆ ಆರೋಹಣ ಕೈಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>