ಈ ಬಗ್ಗೆ ವಿಚಾರಣೆ ನಡೆಸಿದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ‘ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದು ನಿತ್ರಾಣಗೊಂಡಿರುವ ಕೈದಿಗಳನ್ನು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಬೇಕು. 14 ವರ್ಷಗಳ ಕಾಲ ಜೈಲಿನಲ್ಲಿರುವ ಕೈದಿಗಳ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬೇಕು’ ಎಂದು ತಿಳಿಸಿದೆ. ಸಾಧ್ಯವಾದರೆ ಶಿಕ್ಷೆ ಕಡಿತಕ್ಕೆ ಏಕರೂಪ ನೀತಿಯನ್ನು ಜಾರಿ ಮಾಡಬಹುದು ಎಂದು ಸಲಹೆ ನೀಡಿದೆ.