<p><strong>ಕಾಸರಗೋಡು</strong>: ‘ದೇವರ ಮೊಸಳೆ’ ಎಂದೇ ಹೆಸರಾಗಿದ್ದ ಇಲ್ಲಿನ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆ ಬಬಿಯಾ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.</p>.<p>ಈ ಲಕೋಟೆಯಲ್ಲಿ ಅನಂತಪುರದ ಸರೋವರ ದೇವಾಲಯ ಮತ್ತು ಬಬಿಯಾ ಚಿತ್ರಗಳಿವೆ. ಹಿಂಬದಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ದೇವಾಲಯದ ಇತಿಹಾಸ ಮತ್ತು ಬಬಿಯಾ ಜೀವನಚರಿತ್ರೆ ಮುದ್ರಿಸಲಾಗಿದೆ. ಲಕೋಟೆಗೆ ₹10 ದರವಿದೆ.ದ್ದು, ಅಂಚೆ ಫಿಲಾಟಲಿಕ್ ಬ್ಯೂರೊಗಳಲ್ಲಿ ಖರೀದಿಗೆ ಲಭ್ಯವಿದೆ.</p>.<p><strong>ಅನಾವರಣ</strong>: ಕುಂಬಳೆ ಅಂಚೆ ಕಚೇರಿಯಲ್ಲಿ ಮಲಬಾರ್ ದೇವಸ್ವ ಬೋರ್ಡ್(ಕೇರಳ ಮಜರಾಯಿ ಇಲಾಖೆ)ಯ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಮತ್ತು ಕಾಸರಗೋಡು ಜಿಲ್ಲಾ ಅಂಚೆ ವರಿಷ್ಠಾಧಿಕಾರಿ ವಿ.ಶಾರದಾ ಅವರು ಈ ಲಕೋಟೆಯನ್ನು ಅನಾವರಣಗೊಳಿಸಿದರು. ಅನಂತಪುರ ದೇವಾಲಯ ಸಮಿತಿ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ, ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ.ಸೋಮೇಶ್ವರ ಗಟ್ಟಿ, ಪ್ರಿಯಾ, ಪಿ.ಆರ್.ಶೀಲಾ, ಪಿ.ಶಾಂತಾ ಕುಮಾರಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ‘ದೇವರ ಮೊಸಳೆ’ ಎಂದೇ ಹೆಸರಾಗಿದ್ದ ಇಲ್ಲಿನ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆ ಬಬಿಯಾ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.</p>.<p>ಈ ಲಕೋಟೆಯಲ್ಲಿ ಅನಂತಪುರದ ಸರೋವರ ದೇವಾಲಯ ಮತ್ತು ಬಬಿಯಾ ಚಿತ್ರಗಳಿವೆ. ಹಿಂಬದಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ದೇವಾಲಯದ ಇತಿಹಾಸ ಮತ್ತು ಬಬಿಯಾ ಜೀವನಚರಿತ್ರೆ ಮುದ್ರಿಸಲಾಗಿದೆ. ಲಕೋಟೆಗೆ ₹10 ದರವಿದೆ.ದ್ದು, ಅಂಚೆ ಫಿಲಾಟಲಿಕ್ ಬ್ಯೂರೊಗಳಲ್ಲಿ ಖರೀದಿಗೆ ಲಭ್ಯವಿದೆ.</p>.<p><strong>ಅನಾವರಣ</strong>: ಕುಂಬಳೆ ಅಂಚೆ ಕಚೇರಿಯಲ್ಲಿ ಮಲಬಾರ್ ದೇವಸ್ವ ಬೋರ್ಡ್(ಕೇರಳ ಮಜರಾಯಿ ಇಲಾಖೆ)ಯ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಮತ್ತು ಕಾಸರಗೋಡು ಜಿಲ್ಲಾ ಅಂಚೆ ವರಿಷ್ಠಾಧಿಕಾರಿ ವಿ.ಶಾರದಾ ಅವರು ಈ ಲಕೋಟೆಯನ್ನು ಅನಾವರಣಗೊಳಿಸಿದರು. ಅನಂತಪುರ ದೇವಾಲಯ ಸಮಿತಿ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ, ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ.ಸೋಮೇಶ್ವರ ಗಟ್ಟಿ, ಪ್ರಿಯಾ, ಪಿ.ಆರ್.ಶೀಲಾ, ಪಿ.ಶಾಂತಾ ಕುಮಾರಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>