ಅನಾವರಣ: ಕುಂಬಳೆ ಅಂಚೆ ಕಚೇರಿಯಲ್ಲಿ ಮಲಬಾರ್ ದೇವಸ್ವ ಬೋರ್ಡ್(ಕೇರಳ ಮಜರಾಯಿ ಇಲಾಖೆ)ಯ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಮತ್ತು ಕಾಸರಗೋಡು ಜಿಲ್ಲಾ ಅಂಚೆ ವರಿಷ್ಠಾಧಿಕಾರಿ ವಿ.ಶಾರದಾ ಅವರು ಈ ಲಕೋಟೆಯನ್ನು ಅನಾವರಣಗೊಳಿಸಿದರು. ಅನಂತಪುರ ದೇವಾಲಯ ಸಮಿತಿ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ, ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ.ಸೋಮೇಶ್ವರ ಗಟ್ಟಿ, ಪ್ರಿಯಾ, ಪಿ.ಆರ್.ಶೀಲಾ, ಪಿ.ಶಾಂತಾ ಕುಮಾರಿ ಇದ್ದರು.