ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌ ಕುಟುಂಬಕ್ಕೆ ಸಿಬಿಐ ಕಂಟಕ

ಪತ್ನಿಗೆ ರುಜೀರಾ ಬ್ಯಾನರ್ಜಿಗೆ ಸಿಬಿಐ ನೋಟಿಸ್‌ ನೀಡಿದ ಮರುದಿನವೇ ಪತ್ನಿಯ ಸೋದರಿಗೂ ಸಮನ್ಸ್‌
Last Updated 22 ಫೆಬ್ರುವರಿ 2021, 7:10 IST
ಅಕ್ಷರ ಗಾತ್ರ

ಕೋಲ್ಕತಾ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಯ ಸೋದರಿ ಮೇನಕಾ ಗಂಭೀರ್‌ ಅವರಿಗೆಸಿಬಿಐ ಸಮನ್ಸ್‌ಜಾರಿ ಮಾಡಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಗೆ ಈ ಮೊದಲು ವಿಚಾರಣೆಗೆ ಬರುವಂತೆ ಸಿಬಿಐ ತಿಳಿಸಿತ್ತು. ಈಗ ಪತ್ನಿಯ ಸೋದರಿಗೂ ಸಿಬಿಐ ಸಮನ್ಸ್‌ ನೀಡಿದ್ದು, ಇಡೀ ಕುಟುಂಬಕ್ಕೆ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸುತ್ತಿಕೊಂಡಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ರುಜೀರಾ ಬ್ಯಾನರ್ಜಿ ಸಿಬಿಐಗೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸೌಗತ ರಾಯ್‌, ಬಿಜೆಪಿಗೆ ಯಾವುದೇ ಮಿತ್ರಪಕ್ಷಗಳಿಲ್ಲ. ಅವರ ಮಿತ್ರರು ಸಿಬಿಐ ಮತ್ತು ಇಡಿ. ತಮ್ಮ ಮಿತ್ರರನ್ನು ಬೆದರಿಕೆಗೆ, ಒತ್ತಡಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ನೋಟಿಸ್ ನೀಡಿದರೆ ಅದನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT