ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಗೆ ಈ ಮೊದಲು ವಿಚಾರಣೆಗೆ ಬರುವಂತೆ ಸಿಬಿಐ ತಿಳಿಸಿತ್ತು. ಈಗ ಪತ್ನಿಯ ಸೋದರಿಗೂ ಸಿಬಿಐ ಸಮನ್ಸ್ ನೀಡಿದ್ದು, ಇಡೀ ಕುಟುಂಬಕ್ಕೆ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸುತ್ತಿಕೊಂಡಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ರುಜೀರಾ ಬ್ಯಾನರ್ಜಿ ಸಿಬಿಐಗೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸೌಗತ ರಾಯ್, ಬಿಜೆಪಿಗೆ ಯಾವುದೇ ಮಿತ್ರಪಕ್ಷಗಳಿಲ್ಲ. ಅವರ ಮಿತ್ರರು ಸಿಬಿಐ ಮತ್ತು ಇಡಿ. ತಮ್ಮ ಮಿತ್ರರನ್ನು ಬೆದರಿಕೆಗೆ, ಒತ್ತಡಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ನೋಟಿಸ್ ನೀಡಿದರೆ ಅದನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.
BJP is left with no allies. Their only allies are CBI & ED. They are trying to use their allies to threaten, to pressurise the TMC. Whatever notice issued will be dealt with legally: Saugata Roy, TMC MP on CBI notices to Abhishek Banerjee's wife & sister-in-law in coal scam case pic.twitter.com/wIV8IrhCrJ