<p class="bodytext"><strong>ನವದೆಹಲಿ: </strong>ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಶಾಂತಿಯುತ ಪ್ರತಿಭಟನೆ ನಡೆಸದಂತೆ ತಡೆಯುವುದು ಮತ್ತು ಅವರ ವಿರುದ್ಧ ಜಲಫಿರಂಗಿ ಪ್ರಯೋಗಿಸುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.</p>.<p class="bodytext">‘ದೆಹಲಿ ಚಲೊ’ ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಜೊತೆಗೆ ಗಡಿದಾಟುವುದನ್ನು ತಡೆಯಲು ಹರಿಯಾಣ ಗಡಿಯುದ್ಧಕ್ಕೂ ತಡೆಗೋಡೆ ಹಾಕಿ ನಿರ್ಭಂಧಿಸಿತ್ತು. ರೈತರನ್ನು ಚದುರಿಸಲು ಎರಡು ಬಾರಿ ಜಲಫಿರಂಗಿಯನ್ನು ಪ್ರಯೋಗಿಸಲಾಗಿತ್ತು.</p>.<p>ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ರೈತರಿಗೆ ಸಂವಿಧಾನದತ್ತವಾಗಿ ದೊರೆತಿರುವ ಅಧಿಕಾರ. ಕೇಂದ್ರ ರೂಪಿಸಿರುವ ಎಲ್ಲ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತವಿರೋಧಿ. ಅವುಗಳನ್ನು ಹಿಂಪಡೆಯುವ ಬದಲು ಪ್ರತಿಭಟನೆಯನ್ನೇ ಹತ್ತಿಕ್ಕುವುದು ಸರಿಯಾದುದಲ್ಲ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://cms.prajavani.net/india-news/delhi-chalo-farmers-protest-water-cannon-tear-gas-782105.html" target="_blank">ದೆಹಲಿ ಚಲೊ | ಹರಿಯಾಣ- ದೆಹಲಿ ಗಡಿ: ಭಾರೀ ಸಂಖ್ಯೆಯಲ್ಲಿ ರೈತರ ಜಮಾವಣೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ: </strong>ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಶಾಂತಿಯುತ ಪ್ರತಿಭಟನೆ ನಡೆಸದಂತೆ ತಡೆಯುವುದು ಮತ್ತು ಅವರ ವಿರುದ್ಧ ಜಲಫಿರಂಗಿ ಪ್ರಯೋಗಿಸುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.</p>.<p class="bodytext">‘ದೆಹಲಿ ಚಲೊ’ ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಜೊತೆಗೆ ಗಡಿದಾಟುವುದನ್ನು ತಡೆಯಲು ಹರಿಯಾಣ ಗಡಿಯುದ್ಧಕ್ಕೂ ತಡೆಗೋಡೆ ಹಾಕಿ ನಿರ್ಭಂಧಿಸಿತ್ತು. ರೈತರನ್ನು ಚದುರಿಸಲು ಎರಡು ಬಾರಿ ಜಲಫಿರಂಗಿಯನ್ನು ಪ್ರಯೋಗಿಸಲಾಗಿತ್ತು.</p>.<p>ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ರೈತರಿಗೆ ಸಂವಿಧಾನದತ್ತವಾಗಿ ದೊರೆತಿರುವ ಅಧಿಕಾರ. ಕೇಂದ್ರ ರೂಪಿಸಿರುವ ಎಲ್ಲ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತವಿರೋಧಿ. ಅವುಗಳನ್ನು ಹಿಂಪಡೆಯುವ ಬದಲು ಪ್ರತಿಭಟನೆಯನ್ನೇ ಹತ್ತಿಕ್ಕುವುದು ಸರಿಯಾದುದಲ್ಲ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://cms.prajavani.net/india-news/delhi-chalo-farmers-protest-water-cannon-tear-gas-782105.html" target="_blank">ದೆಹಲಿ ಚಲೊ | ಹರಿಯಾಣ- ದೆಹಲಿ ಗಡಿ: ಭಾರೀ ಸಂಖ್ಯೆಯಲ್ಲಿ ರೈತರ ಜಮಾವಣೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>