ನವದೆಹಲಿ: ಭಾರತಕ್ಕೆ ಬರುವಅಫ್ಗಾನಿಸ್ತಾನ ನಾಗರಿಕರಿಗೆ ಕೇಂದ್ರ ಸರ್ಕಾರವು ಆರು ತಿಂಗಳ ವೀಸಾ ಸೌಲಭ್ಯ ನೀಡಲಿದೆ. ಬಳಿಕ ಅದನ್ನು ಹಿಂಪಡೆಯಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ವೀಸಾ ಸೌಲಭ್ಯವನ್ನು ದೀರ್ಘಕಾಲ ಮುಂದುವರಿಸುವುದು ಸರಿಯಾದ ಯೋಜನೆಯಲ್ಲ ಎಂದುವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ಅಫ್ಗಾನಿಸ್ತಾನದ ತಾಲಿಬಾನ್ ವಶವಾದ ಬಳಿಕ ಅಲ್ಲಿನ ನಾಗರಿಕರು ಮತ್ತು ವಿದೇಶಿಗರು ಅಫ್ಗಾನ್ನಿಂದಪಲಾಯನ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿರಿಸಿ ಕೇಂದ್ರ ಗೃಹ ಸಚಿವಾಲಯವು, ಸದ್ಯದ ಪರಿಸ್ಥಿತಿಯಲ್ಲಿ ಅಫ್ಗನ್ನರು ಇ-ವೀಸಾ ಬಳಸಿ ಭಾರತಕ್ಕೆ ಬರಬಹುದು ಎಂದು ಪ್ರಕಟಿಸಿತ್ತು.
ವೀಸಾ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ʼಆರು ತಿಂಗಳ ವೀಸಾ ಬಳಸಿ ಅವರೆಲ್ಲ (ಅಫ್ಗನ್ನರು) ಸದ್ಯ ಭಾರತಕ್ಕೆ ಬರುತ್ತಿದ್ದಾರೆ. ಅದಾದ ಬಳಿಕ ಅವನ್ನು (ವೀಸಾವನ್ನು) ಹಿಂಪಡೆಯಲಿದ್ದೇವೆ.ಸದ್ಯ ಪರಿಸ್ಥಿತಿಬಿಗಡಾಯಿಸುತ್ತಿದೆ. ವೀಸಾ ಯೋಜನೆಯನ್ನು ದೀರ್ಘಾವಧಿಗೆ ವಿಸ್ತರಿಸುವುದು ಉತ್ತಮ ಆಲೋಚನೆಯಾಗುವುದಿಲ್ಲʼ ಎಂದು ಹೇಳಿದ್ದಾರೆ.
ʼನಾವು ಇ-ಎಮರ್ಜೆನ್ಸಿ ವೀಸಾ ವ್ಯವಸ್ಥೆಯಮೊರೆ ಹೋಗುತ್ತಿದ್ದೇವೆ. ಇದು ನಿರ್ದಿಷ್ಟವಾಗಿ ಅಫ್ಗನ್ನರಿಗೆ ಭಾರತಕ್ಕೆ ಪ್ರವೇಶ ನಿರಾಕರಿಸುವಂತಹ ದುರದೃಷ್ಟಕರ ಘಟನೆಗಳಿಗೆ ಕಾರಣವಾಗುವ ಕೆಲವು ಗೊಂದಲಗಳಿಗೆ ದಾರಿಮಾಡಿಕೊಡಬಹುದು ಎಂದೆನಿಸುತ್ತದೆʼ ಎಂದಿದ್ದಾರೆ.
ಮುಂದುವರಿದು,ಅಫ್ಗಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಈನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿರುವ ಬಾಗ್ಚಿ, ಭಾರತದ ವೀಸಾದೊಂದಿಗೆ ಅಫ್ಗಾನಿಸ್ತಾನ ಪಾಸ್ಪೋರ್ಟ್ಗಳಿದ್ದನಮ್ಮ ಅರೆಗುತ್ತಿಗೆ ಏಜೆನ್ಸಿಯೊಂದರ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿರುವುದಾಗಿಯೂತಿಳಿಸಿದ್ದಾರೆ.
1,000 ವೀಸಾಗಳು ಕಳ್ಳತನವಾಗಿರುವ ಬಗ್ಗೆ ವರದಿಯಾದ ಬಳಿಕ, ಅಫ್ಗಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆಗಸ್ಟ್ 12 ಮತ್ತು 14ರ ನಡುವೆ ವಿತರಿಸಿದ್ದ11,000ಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಇ-ವೀಸಾ ಆರಂಭಿಸಿದೆ.
ಕಳವಾಗಿರುವ ವೀಸಾಗಳು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದರು.
ಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಸದ್ಯ ಅತಂತ್ರವಾಗಿದೆ. ತಾಲಿಬಾನ್ ಸಂಘಟನೆ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ಬಳಿಕ, ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಆತಂಕಕ್ಕೊಳಗಾಗಿರುವ ಅಲ್ಲಿನ ನಾಗರಿಕರು ಮತ್ತು ವಿದೇಶಿ ಪ್ರಜೆಗಳೂ ಅಫ್ಗಾನ್ತೊರೆಯಲು ಹರಸಾಹಸ ಮಾಡುತ್ತಿದ್ದಾರೆ. ಈ ನಡುವೆಯೇ ಆಗಸ್ಟ್26ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟುಹದಗೆಡಿಸಿದೆ.
ಇವನ್ನೂ ಓದಿ
*ಯಾವುದೇ ಕಾರಣಕ್ಕೂ ದೇಶ ತೊರೆಯಲು ನೀಡಿದ ಗಡುವು ವಿಸ್ತರಿಸಲ್ಲ: ತಾಲಿಬಾನ್
*ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡ ವಿದೇಶಿಗರಿಗೆ ಸ್ಥಳ ನೀಡಲು ಪಾಕ್ ಸಿದ್ಧತೆ
*ಕಾಬೂಲ್: ಬಾಂಬ್ ದಾಳಿಯ ನಂತರ ಮತ್ತೆ ಜನರ ತೆರವು ಕಾರ್ಯ ಆರಂಭ
*ಈ ನೋವು ನನ್ನನ್ನು ಬಲಪಡಿಸುತ್ತಿದೆ: ಕಾಬೂಲ್ ತೊರೆದ ಯುವ ಚಿತ್ರ ನಿರ್ದೇಶಕಿಯ ಮಾತು
*ಕಾಬೂಲ್: ಕನಸು ಛಿದ್ರಗೊಳಿಸಿದ ಆತ್ಮಹತ್ಯಾ ದಾಳಿ, ಆಘಾತದಿಂದ ಹೊರಬರದ ಸಂತ್ರಸ್ತರು
*ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯಾ ದಾಳಿ: 28 ತಾಲಿಬಾನಿಗಳ ಸಾವು
*ಕಾಬೂಲ್: ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ: ಐಎಸ್ ಖುರಾಸನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.