<p class="bodytext"><strong>ನವದೆಹಲಿ: </strong>ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ‘ರಾಖಿ’ ಕಟ್ಟುವಂತೆ ಆರೋಪಿಗಳಿಗೆ ಷರತ್ತು ವಿಧಿಸುವುದು ‘ನಾಟಕ’ ಎನಿಸುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.</p>.<p class="bodytext">ದೌರ್ಜನ್ಯ ಪ್ರಕರಣಗಳಲ್ಲಿ ಮುಖ್ಯವಾಗಿ ಜಾಮೀನು ನೀಡುವಾಗ ವಾಸ್ತವಾಂಶ ಗಮನಿಸಬೇಕು ಹಾಗೂ ಲಿಂಗಸಂವೇದನೆ ಇರಬೇಕು ಎಂಬ ಬಗ್ಗೆ ನ್ಯಾಯಮೂರ್ತಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು.</p>.<p class="bodytext">ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಮಧ್ಯಪ್ರದೇಶ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠದ ಎದುರು ಈ ಅಭಿಪ್ರಾಯ ಮಂಡಿಸಿದರು.</p>.<p class="bodytext">‘ರಾಖಿ’ ಕಟ್ಟುವಂತೆ ನೊಂದ ಯುವತಿಗೆ ಆರೋಪಿ ಮನವಿ ಮಾಡಬೇಕು’ ಎಂಬ ಷರತ್ತಿಗೆ ಅನುಗುಣವಾಗಿ ಜಾಮೀನು ನೀಡಲಾಗಿತ್ತು. ಈ ಆದೇಶಕ್ಕೆ ತಡೆ ಕೋರಿದ್ದ ಒಂಭತ್ತು ಮಂದಿ ಮಹಿಳಾ ವಕೀಲರು, ‘ಇಂಥ ಷರತ್ತು ವಿಧಿಸದಂತೆ ಕೋರ್ಟ್ಗಳಿಗೆ ನಿರ್ಬಂಧ ಹೇರಬೇಕು. ಇಂಥ ಕ್ರಮ ಕಾನೂನು ನೀತಿಗಳಿಗೆ ವಿರುದ್ಧವಾದುದು’ ಎಂದು ಕೋರಿದ್ದರು.</p>.<p class="bodytext">ಆರೋಪಿ ತನ್ನ ಪತ್ನಿ ಜತೆಗೂಡಿ ನೊಂದ ಯುವತಿಯ ಮನೆಗೆ ಹೋಗಿ ‘ರಾಖಿ’ ಕಟ್ಟುವಂತೆ ಕೋರಬೇಕು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ರಕ್ಷಣೆ ನೀಡುತ್ತೇನೆ ಎಂದು ಆಕೆಗೆ ವಾಗ್ದಾನ ಮಾಡಬೇಕು ಎಂದು ಹೈಕೋರ್ಟ್ ಷರತ್ತು ಹೇರಿತ್ತು.</p>.<p>ವೇಣುಗೋಪಾಲ್ ಅವರು, ‘ಲಿಂಗ ಸಂವೇದನೆ ಇರಬೇಕು’ ಎಂಬ ಮಾತು ಬಳಸಿದಾಗ, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರಿದ್ದ ಪೀಠವು, ‘ಲಿಂಗ ಸಂವೇದನೆ ನಮ್ಮ ತೀರ್ಪಿನ ಭಾಗವಾಗಿರುತ್ತದೆ’ ಎಂದು ಹೇಳಿತು.</p>.<p>ಈ ಬಗ್ಗೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತತ್ತು ರಾಜ್ಯ ಅಕಾಡೆಮಿಗಳು ಜಾಗೃತಿ ಮೂಡಿಸಬೇಕು. ಲಿಂಗ ಸಂವೇದನೆ ವಿಷಯವು ನ್ಯಾಯಮೂರ್ತಿಗಳ ನೇಮಕಾತಿ ಪರೀಕ್ಷೆಯ ಭಾಗವಾಗಿರಬೇಕು ಎಂದು ವೇಣುಗೋಪಾಲ್ ಹೇಳಿದರು.</p>.<p>‘ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ಅಟಾರ್ನಿ ಜನರಲ್, ಅರ್ಜಿದಾರರು, ಸಂಬಂಧಿತ ಭಾಗಿದಾರರು ಹೇಳಿಕೆ ದಾಖಲಿಸಬಹುದು’ ಎಂದು ಹೇಳಿದ ಪೀಠ ಪ್ರಕರಣದ ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ: </strong>ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ‘ರಾಖಿ’ ಕಟ್ಟುವಂತೆ ಆರೋಪಿಗಳಿಗೆ ಷರತ್ತು ವಿಧಿಸುವುದು ‘ನಾಟಕ’ ಎನಿಸುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.</p>.<p class="bodytext">ದೌರ್ಜನ್ಯ ಪ್ರಕರಣಗಳಲ್ಲಿ ಮುಖ್ಯವಾಗಿ ಜಾಮೀನು ನೀಡುವಾಗ ವಾಸ್ತವಾಂಶ ಗಮನಿಸಬೇಕು ಹಾಗೂ ಲಿಂಗಸಂವೇದನೆ ಇರಬೇಕು ಎಂಬ ಬಗ್ಗೆ ನ್ಯಾಯಮೂರ್ತಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು.</p>.<p class="bodytext">ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಮಧ್ಯಪ್ರದೇಶ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠದ ಎದುರು ಈ ಅಭಿಪ್ರಾಯ ಮಂಡಿಸಿದರು.</p>.<p class="bodytext">‘ರಾಖಿ’ ಕಟ್ಟುವಂತೆ ನೊಂದ ಯುವತಿಗೆ ಆರೋಪಿ ಮನವಿ ಮಾಡಬೇಕು’ ಎಂಬ ಷರತ್ತಿಗೆ ಅನುಗುಣವಾಗಿ ಜಾಮೀನು ನೀಡಲಾಗಿತ್ತು. ಈ ಆದೇಶಕ್ಕೆ ತಡೆ ಕೋರಿದ್ದ ಒಂಭತ್ತು ಮಂದಿ ಮಹಿಳಾ ವಕೀಲರು, ‘ಇಂಥ ಷರತ್ತು ವಿಧಿಸದಂತೆ ಕೋರ್ಟ್ಗಳಿಗೆ ನಿರ್ಬಂಧ ಹೇರಬೇಕು. ಇಂಥ ಕ್ರಮ ಕಾನೂನು ನೀತಿಗಳಿಗೆ ವಿರುದ್ಧವಾದುದು’ ಎಂದು ಕೋರಿದ್ದರು.</p>.<p class="bodytext">ಆರೋಪಿ ತನ್ನ ಪತ್ನಿ ಜತೆಗೂಡಿ ನೊಂದ ಯುವತಿಯ ಮನೆಗೆ ಹೋಗಿ ‘ರಾಖಿ’ ಕಟ್ಟುವಂತೆ ಕೋರಬೇಕು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ರಕ್ಷಣೆ ನೀಡುತ್ತೇನೆ ಎಂದು ಆಕೆಗೆ ವಾಗ್ದಾನ ಮಾಡಬೇಕು ಎಂದು ಹೈಕೋರ್ಟ್ ಷರತ್ತು ಹೇರಿತ್ತು.</p>.<p>ವೇಣುಗೋಪಾಲ್ ಅವರು, ‘ಲಿಂಗ ಸಂವೇದನೆ ಇರಬೇಕು’ ಎಂಬ ಮಾತು ಬಳಸಿದಾಗ, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರಿದ್ದ ಪೀಠವು, ‘ಲಿಂಗ ಸಂವೇದನೆ ನಮ್ಮ ತೀರ್ಪಿನ ಭಾಗವಾಗಿರುತ್ತದೆ’ ಎಂದು ಹೇಳಿತು.</p>.<p>ಈ ಬಗ್ಗೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತತ್ತು ರಾಜ್ಯ ಅಕಾಡೆಮಿಗಳು ಜಾಗೃತಿ ಮೂಡಿಸಬೇಕು. ಲಿಂಗ ಸಂವೇದನೆ ವಿಷಯವು ನ್ಯಾಯಮೂರ್ತಿಗಳ ನೇಮಕಾತಿ ಪರೀಕ್ಷೆಯ ಭಾಗವಾಗಿರಬೇಕು ಎಂದು ವೇಣುಗೋಪಾಲ್ ಹೇಳಿದರು.</p>.<p>‘ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ಅಟಾರ್ನಿ ಜನರಲ್, ಅರ್ಜಿದಾರರು, ಸಂಬಂಧಿತ ಭಾಗಿದಾರರು ಹೇಳಿಕೆ ದಾಖಲಿಸಬಹುದು’ ಎಂದು ಹೇಳಿದ ಪೀಠ ಪ್ರಕರಣದ ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>