ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ವಾಪಸು ಪಡೆಯಲು ಪಂಜಾಬ್ ಮುಖ್ಯಮಂತ್ರಿ ಮನವಿ

Last Updated 26 ಜನವರಿ 2021, 10:33 IST
ಅಕ್ಷರ ಗಾತ್ರ

ಪಟಿಯಾಲ: ಕೃಷಿ ತಿದ್ದುಪಡಿ ಕಾಯ್ದೆಯು ಸರಿಯಾದುದಲ್ಲ ಎಂದು ಅಭಿಪ್ರಾಯಪಟ್ಟಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ನೂತನ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ವಯಸ್ಸಾಗಿರುವ ರೈತರು ಗಡಿ ಭಾಗದಲ್ಲಿ ಧರಣಿ ಕುಳಿತಿದ್ದಾರೆ. ಈ ಧರಣಿ ಅವರಿಗಾಗಿಯಲ್ಲ, ಅವರ ಮಕ್ಕಳು ಮತ್ತು ಭವಿಷ್ಯದ ಪೀಳಿಗೆಗಾಗಿ. ಸಂವಿಧಾನದ 7ನೇ ಪರಿಚ್ಛೇದ ಅನುಸಾರ ಕೃಷಿ ಎಂದಿಗೂ ರಾಜ್ಯದ ವಿಷಯವಾಗಿದ್ದು, ಕೇಂದ್ರ ರೂಪಿಸಿರುವ ಕಾಯ್ದೆ ಸರಿಯಾದುದಲ್ಲ ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದ ಅವರು, ಕೃಷಿಕರ ಬೇಡಿಕೆಯನ್ನು ಈಡೇರಿಸಬೇಕು ಎಂಬುದು ನನ್ನ ಮನವಿ ಎಂದರು. ಶಾಂತಿ ಕಾಪಾಡಿಕೊಳ್ಳಿ, ದೇಶ ನಿಮ್ಮೊಂದಿಗೆ ಇದೆ ಎಂದು ಪ್ರತಿಭಟನನಿರತ ರೈತರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT