ಎಕ್ಸೈಸ್ ಸುಂಕ ಇಳಿಕೆ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ‘ಮೋದಿ ದೇಶದ ಪ್ರತಿಯೊಂದು ವರ್ಗದ ಬಗ್ಗೆ ಕಾಳಜಿ ವಹಿಸುವ ಸಂವೇದನಾಶೀಲ ನಾಯಕ. ಹಾಗಾಗಿ ಕಳೆದ 8 ವರ್ಷಗಳಿಂದ ದೇಶದ ಬಡವರು, ರೈತರು, ಜನಸಾಮಾನ್ಯರ ಹಿತಾಸಕ್ತಿ ಹಾಗೂ ಕಾಳಜಿಯೇ ಮೋದಿ ಸರ್ಕಾರದ ನಿರ್ಧಾರಗಳ ಕೇಂದ್ರಬಿಂದುವಾಗಿದೆ. ಈ ಜನಸ್ನೇಹಿ ನಿರ್ಧಾರಕ್ಕಾಗಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.