<p><strong>ಹೈದರಾಬಾದ್</strong>: ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಣ ವಿವಾದದ ಹಿನ್ನೆಲೆಯಲ್ಲಿ ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲಾದ ಜಲವಿದ್ಯುತ್ ಯೋಜನೆಗಳ ಬಳಿ ಗುರುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.</p>.<p>ಯೋಜನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಭಯ ಮಾರ್ಗಗಳಲ್ಲಿ ಪೊಲೀಸ್ನ ಬಿಗಿ ಬಂದೋಬಸ್ತ್ ಇತ್ತು. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿ 2015ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಚಂದ್ರಬಾಬು ನಾಯ್ಡು ಮತ್ತು ಕೆ.ಚಂದ್ರಶೇಖರ ರಾವ್ ಬಿಗಿ ನಿಲುವು ಕೈಗೊಂಡ ನಂತರ ಪರಿಸ್ಥಿತಿ ಬಿಗಡಾಯಿಸಿದೆ.</p>.<p>ಆಂಧ್ರದ ಮುಖ್ಯಮಂತ್ರಿಯಾಗಿ ಜಗನ್ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸೌಹಾರ್ದವಾಗಿ ವಿವಾದ ಬಗೆಹರಿಸಿಕೊಳ್ಳಲು ಒತ್ತು ನೀಡಿದ್ದರು. ಆದರೆ, ಮೇ 2020ರಲ್ಲಿ ರಾಯಲಸೀಮಾ ಏತನೀರಾವತಿ ಯೋಜನೆಗೆ ಶ್ರೀಶೈಲಂ ಜಲಾಶಯದಿಂದ 3 ಟಿ.ಎಂ.ಸಿ ನೀರು ಪಡೆಯುವ ವಿಷಯ ಸಮಸ್ಯೆಯನ್ನು ಮತ್ತೆ ಹೆಚ್ಚಿಸಿತ್ತು.</p>.<p>ಆಗ, ಜಗನಮೋಹನ್ ರೆಡ್ಡಿ ಹಾಗೂ ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈ.ಎಸ್.ಆರ್.ರೆಡ್ಡಿ ಅವರ ವಿರುದ್ಧವೂ ಆರೋಪ ಮಾಡಿದ್ದು, ತೆಲಂಗಾಣದ ಪಾಲಿನ ನೀರನ್ನು ಆಂಧ್ರಪ್ರದೇಶ ಕಳವು ಮಾಡುತ್ತಿದೆ ಎಂದು ಕೆಲ ಸಚಿವರು ಆರೋಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಣ ವಿವಾದದ ಹಿನ್ನೆಲೆಯಲ್ಲಿ ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲಾದ ಜಲವಿದ್ಯುತ್ ಯೋಜನೆಗಳ ಬಳಿ ಗುರುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.</p>.<p>ಯೋಜನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಭಯ ಮಾರ್ಗಗಳಲ್ಲಿ ಪೊಲೀಸ್ನ ಬಿಗಿ ಬಂದೋಬಸ್ತ್ ಇತ್ತು. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿ 2015ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಚಂದ್ರಬಾಬು ನಾಯ್ಡು ಮತ್ತು ಕೆ.ಚಂದ್ರಶೇಖರ ರಾವ್ ಬಿಗಿ ನಿಲುವು ಕೈಗೊಂಡ ನಂತರ ಪರಿಸ್ಥಿತಿ ಬಿಗಡಾಯಿಸಿದೆ.</p>.<p>ಆಂಧ್ರದ ಮುಖ್ಯಮಂತ್ರಿಯಾಗಿ ಜಗನ್ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸೌಹಾರ್ದವಾಗಿ ವಿವಾದ ಬಗೆಹರಿಸಿಕೊಳ್ಳಲು ಒತ್ತು ನೀಡಿದ್ದರು. ಆದರೆ, ಮೇ 2020ರಲ್ಲಿ ರಾಯಲಸೀಮಾ ಏತನೀರಾವತಿ ಯೋಜನೆಗೆ ಶ್ರೀಶೈಲಂ ಜಲಾಶಯದಿಂದ 3 ಟಿ.ಎಂ.ಸಿ ನೀರು ಪಡೆಯುವ ವಿಷಯ ಸಮಸ್ಯೆಯನ್ನು ಮತ್ತೆ ಹೆಚ್ಚಿಸಿತ್ತು.</p>.<p>ಆಗ, ಜಗನಮೋಹನ್ ರೆಡ್ಡಿ ಹಾಗೂ ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈ.ಎಸ್.ಆರ್.ರೆಡ್ಡಿ ಅವರ ವಿರುದ್ಧವೂ ಆರೋಪ ಮಾಡಿದ್ದು, ತೆಲಂಗಾಣದ ಪಾಲಿನ ನೀರನ್ನು ಆಂಧ್ರಪ್ರದೇಶ ಕಳವು ಮಾಡುತ್ತಿದೆ ಎಂದು ಕೆಲ ಸಚಿವರು ಆರೋಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>