ತಮಿಳುನಾಡಿನ ವೆಲ್ಲೂರು ಮೂಲದ ಬಾಲಾಜಿ ಸಂಪತ್ ಬಂಧಿತ ಯೋಧ. ನಿಲ್ದಾಣದಲ್ಲಿ ಬ್ಯಾಗ್ಗಳನ್ನು ತಪಾಸಣೆ ಮಾಡುವಾಗ ಜೀವಂತ ಹ್ಯಾಂಡ್ ಗ್ರೆನೆಡ್ ಪತ್ತೆಯಾಗಿದೆ. ಬಂಧಿತ ಯೋಧ ಇಂಡಿಗೋ ವಿಮಾನದಲ್ಲಿ ಶ್ರೀನಗರದಿಂದ ದೆಹಲಿ ಮೂಲಕ ಚೆನ್ನೈಗೆ ತೆರಳಬೇಕಿತ್ತು. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಯೋಧನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.