ಇಲ್ಲಿನ ಎನ್ಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸರ್ಕಾರ ಹೇಳಿದಂತೆ ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೆ, ಇಲ್ಲಿನ ಪ್ರಸಿದ್ಧ ಜಾಮೀಯ ಮಸೀದಿಯಲ್ಲಿ ಶಾಬ್–ಎ–ಕದ್ರ್ ಹಾಗೂ ಜುಮಾತ್–ಉಲ್–ವಿದಾ ಪ್ರಾರ್ಥನೆಗೆ ನಿರ್ಬಂಧ ವಿಧಿಸಿರುವುದೇಕೆ’ ಎಂದು ಪ್ರಶ್ನಿಸಿದರು.