ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಐ ಅಧ್ಯಕ್ಷರಾಗಿ ಅವೀಕ್‌ ಸರ್ಕಾರ್‌ ಮರು ಆಯ್ಕೆ

ಟಿಪಿಎಂಎಲ್‌ನ ಕೆ.ಎನ್‌.ಶಾಂತ ಕುಮಾರ್‌ ಉಪಾಧ್ಯಕ್ಷ
Last Updated 24 ಸೆಪ್ಟೆಂಬರ್ 2021, 6:26 IST
ಅಕ್ಷರ ಗಾತ್ರ

ನವದೆಹಲಿ: ‘ಆನಂದ್‌ ಬಜಾರ್‌’ ಪತ್ರಿಕಾ ಸಮೂಹದ ಗೌರವ ಸಂಪಾದಕ ಮತ್ತು ಉಪಾಧ್ಯಕ್ಷರಾಗಿರುವ ಅವೀಕ್ ಸರ್ಕಾರ್‌ ಅವರು ದೇಶದ ಪ್ರಮುಖ ಸುದ್ದಿ ಸಂಸ್ಥೆ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾದ (ಪಿಟಿಐ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಪಿಟಿಐ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾಯ್ಕೆ ಮಾಡಲಾಗಿದೆ.

‘ಪ್ರಜಾವಾಣಿ’ ಮತ್ತು ’ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಮಾತೃಸಂಸ್ಥೆಯಾದ ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌’ನ ನಿರ್ದೇಶಕ ಕೆ.ಎನ್‌.ಶಾಂತ ಕುಮಾರ್‌ ಅವರು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಇತರ ಪದಾಧಿಕಾರಿಗಳು: ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ವಿಜಯ್‌ ಕುಮಾರ್‌ ಚೋಪ್ರಾ (ಪಂಜಾಬ್‌ ಕೇಸರಿ), ವಿನೀತ್‌ ಜೈನ್‌ (ಟೈಮ್ಸ್‌ ಆಫ್‌ ಇಂಡಿಯಾ), ಎನ್‌. ರವಿ (ದ ಹಿಂದು), ವಿವೇಕ್ ಗೋಯೆಂಕಾ (ದ ಎಕ್ಸ್‌ಪ್ರೆಸ್ ಗ್ರೂಪ್‌), ಮಹೇಂದ್ರ ಮೋಹನ್‌ ಗುಪ್ತಾ (ದೈನಿಕ್‌ ಜಾಗ್ರತ್‌), ರಿಯಾದ್‌ ಮ್ಯಾಥ್ಯು (ಮಲಯಾಳ ಮನೋರಮ), ಎಂ.ವಿ. ಶ್ರೇಯಾಂಶ್‌ ಕುಮಾರ್‌ (ಮಾತೃಭೂಮಿ), ಆರ್‌. ಲಕ್ಷ್ಮೀಪತಿ (ದಿನಮಲರ್‌), ಹೊರ್‌ಮುಸ್ಜಿ ಎನ್‌. ಕಾಮಾ (ಬಾಂಬೆ ಸಮಾಚಾರ್‌),ಪ್ರವೀಣ್‌ ಸೋಮೇಶ್ವರ (ಹಿಂದುಸ್ತಾನ್‌ ಟೈಮ್ಸ್‌), ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ದೀಪಕ್‌ ನಯ್ಯರ್‌, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್‌ ಮೆನನ್‌, ಹಿರಿಯ ಪತ್ರಕರ್ತ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯ ಮಾಜಿ ಅಧ್ಯಕ್ಷ ಟಿ.ಎನ್‌. ನಿನಾನ್‌ ಮತ್ತು ಟಾಟಾ ಸನ್ಸ್‌ ಲಿಮಿಟೆಡ್‌ನ ಮಾಜಿ ಕಾರ್ಯಕಾರಿ ನಿರ್ದೇಶಕ ಆರ್‌. ಗೋಪಾಲಕೃಷ್ಣನ್‌ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT