ನವದೆಹಲಿ: ಹೆಸರಾಂತ ಲೇಖಕ ಬಾಬು ಕೃಷ್ಣಮೂರ್ತಿ ರಚಿತ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿಯು ಇಂಗ್ಲಿಷ್ಗೆ ಅನುವಾದಗೊಂಡಿದ್ದು, ಸ್ವಾತಂತ್ರ್ಯ ಸೇನಾನಿ ಆಜಾದ್ ಅವರ 115ನೇ ಜನ್ಮ ದಿನದ ಪ್ರಯುಕ್ತ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪುಸ್ತಕ ಪ್ರಕಾಶನ ಸಂಸ್ಥೆ ಗರುಡ ಪ್ರಕಾಶನ ಶುಕ್ರವಾರ ತಿಳಿಸಿದೆ.