ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯನಿರ್ವಾಹಕ ಸದಸ್ಯ ಜಫರ್ಯಾಬ್ ಜಿಲಾನಿ ಅವರು ಅರ್ಜಿದಾರರ ಸಲಹೆಗಾರರು ಮತ್ತು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರೂ ಆಗಿದ್ದಾರೆ. ಈ ಪ್ರಕರಣದ ಕುರಿತು ಕಳೆದ ವರ್ಷ ಸೆ. 30ರಂದು ನೀಡಿದ ತೀರ್ಪಿನ ವಿರುದ್ಧ ಸಿಬಿಐ ಇನ್ನೂ ಮೇಲ್ಮನವಿ ಸಲ್ಲಿಸದ ಕಾರಣ, ಇಬ್ಬರು ಅಯೋಧ್ಯೆ ನಿವಾಸಿಗಳು, ಆ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದಾಗಿ ಜಿಲಾನಿ ಹೇಳಿದ್ದಾರೆ. ಈ ಅರ್ಜಿದಾರರು, ತಾವು ಸಾಕ್ಷಿದಾರರು ಎಂದು ಹೇಳಿಕೊಂಡಿದ್ದಾರೆ.