<p><strong>ಚಂಡೀಗಡ:</strong> ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಭೇಟಿಯಾಗಿರುವ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಮಾತುಕತೆ ನಡೆಸಿದ್ದಾರೆ.</p>.<p>ಸಿಎಂಟೀಕಾಕಾರಬಾಜ್ವಾ ಅವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡಿರುವ ಅಮರಿಂದರ್ ಚರ್ಚೆ ನಡೆಸಿದ್ದಾರೆ. ಇದು ಹೆಚ್ಚಿನ ಕುತೂಹಲ ಮೂಡಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/any-decision-by-cong-president-acceptable-to-all-amarinder-after-meeting-rawat-848991.html" itemprop="url">‘ಸೋನಿಯಾ ಗಾಂಧಿ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧ’: ಅಮರಿಂದರ್ ಸಿಂಗ್ </a></p>.<p>ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಬಾಜ್ವಾ ಹೊರತಾಗಿ ಪಂಜಾಬ್ ವಿಧಾನಸಭಾ ಸ್ಪೀಕರ್ ರಾಣಾ ಕೆ.ಪಿ. ಸಿಂಗ್ ಮತ್ತು ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಉಪಸ್ಥಿತರಿದ್ದರು.</p>.<p>ಶನಿವಾರದಂದೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್, ಸಿಎಂ ನಿಷ್ಠಾವಂತರು ಸೇರಿದಂತೆ ಹಲವಾರು ಶಾಸಕರೊಂದಿಗೆ ಸಿಧು ಮಾತುಕತೆ ನಡೆಸಿದ್ದರು.</p>.<p>ಈ ಕುರಿತು ಸಿಎಂ ಮಾಧ್ಯಮ ಸಲಹೆಗಾರ ಟ್ವೀಟ್ ಮಾಡಿದ್ದು, ಚಿತ್ರವನ್ನು ಹಂಚಿದ್ದಾರೆ.</p>.<p>ಇದನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ರಿ ಟ್ವೀಟ್ ಮಾಡಿದ್ದು, ಬಾಜ್ವಾ ಹಾಗೂ ಅಮರಿಂದರ್ ಜೊತೆಯಾಗಿ ನೋಡಿರುವುದು ಖುಷಿ ತಂದಿದೆ. ಸಿಎಂ ಉತ್ತಮ ತಂಡವನ್ನು ಕಟ್ಟಬಲ್ಲರು ಎಂದು ಹೇಳಿದ್ದಾರೆ.</p>.<p>ಇದಕ್ಕೂ ಮೊದಲು ಅಮರಿಂದರ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರನ್ನು ಭೇಟಿಯಾಗಿದ್ದರು.</p>.<p>'ಗುರು ಗ್ರಂಥ ಸಾಹೀಬ' ಅಪವಿತ್ರಗೊಳಿಸಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವುದು ಮತ್ತು 2015ರಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯನ್ನು ಈಡೇರಿಸದ್ದಕ್ಕೆ ಅಮರಿಂದರ್ ಅವರನ್ನು ಬಾಜ್ವಾ ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ:</strong> ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಭೇಟಿಯಾಗಿರುವ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಮಾತುಕತೆ ನಡೆಸಿದ್ದಾರೆ.</p>.<p>ಸಿಎಂಟೀಕಾಕಾರಬಾಜ್ವಾ ಅವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡಿರುವ ಅಮರಿಂದರ್ ಚರ್ಚೆ ನಡೆಸಿದ್ದಾರೆ. ಇದು ಹೆಚ್ಚಿನ ಕುತೂಹಲ ಮೂಡಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/any-decision-by-cong-president-acceptable-to-all-amarinder-after-meeting-rawat-848991.html" itemprop="url">‘ಸೋನಿಯಾ ಗಾಂಧಿ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧ’: ಅಮರಿಂದರ್ ಸಿಂಗ್ </a></p>.<p>ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಬಾಜ್ವಾ ಹೊರತಾಗಿ ಪಂಜಾಬ್ ವಿಧಾನಸಭಾ ಸ್ಪೀಕರ್ ರಾಣಾ ಕೆ.ಪಿ. ಸಿಂಗ್ ಮತ್ತು ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಉಪಸ್ಥಿತರಿದ್ದರು.</p>.<p>ಶನಿವಾರದಂದೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್, ಸಿಎಂ ನಿಷ್ಠಾವಂತರು ಸೇರಿದಂತೆ ಹಲವಾರು ಶಾಸಕರೊಂದಿಗೆ ಸಿಧು ಮಾತುಕತೆ ನಡೆಸಿದ್ದರು.</p>.<p>ಈ ಕುರಿತು ಸಿಎಂ ಮಾಧ್ಯಮ ಸಲಹೆಗಾರ ಟ್ವೀಟ್ ಮಾಡಿದ್ದು, ಚಿತ್ರವನ್ನು ಹಂಚಿದ್ದಾರೆ.</p>.<p>ಇದನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ರಿ ಟ್ವೀಟ್ ಮಾಡಿದ್ದು, ಬಾಜ್ವಾ ಹಾಗೂ ಅಮರಿಂದರ್ ಜೊತೆಯಾಗಿ ನೋಡಿರುವುದು ಖುಷಿ ತಂದಿದೆ. ಸಿಎಂ ಉತ್ತಮ ತಂಡವನ್ನು ಕಟ್ಟಬಲ್ಲರು ಎಂದು ಹೇಳಿದ್ದಾರೆ.</p>.<p>ಇದಕ್ಕೂ ಮೊದಲು ಅಮರಿಂದರ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರನ್ನು ಭೇಟಿಯಾಗಿದ್ದರು.</p>.<p>'ಗುರು ಗ್ರಂಥ ಸಾಹೀಬ' ಅಪವಿತ್ರಗೊಳಿಸಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವುದು ಮತ್ತು 2015ರಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯನ್ನು ಈಡೇರಿಸದ್ದಕ್ಕೆ ಅಮರಿಂದರ್ ಅವರನ್ನು ಬಾಜ್ವಾ ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>