<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ತಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ರಾಜಭವನದ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ(ಒಎಸ್ಡಿ) ನೇಮಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮಾಡಿರುವ ಆರೋಪವನ್ನು ಧನ್ಕರ್ ತಳ್ಳಿ ಹಾಕಿದ್ದಾರೆ.</p>.<p>‘ಇದು ಸುಳ್ಳು ಸುದ್ದಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರಾಜಭವನದಲ್ಲಿ ವಿಶೇಷ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರಲ್ಲ’ ಎಂದು ಅವರು ಹೇಳಿದ್ದಾರೆ.</p>.<p>‘ಒಎಸ್ಡಿಗೆ ನೇಮಿಸಲಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರು ಎಂದು ಮಹುವಾ ಮೊಹಿತ್ರಾ ಅವರು ದೂರಿದ್ದಾರೆ. ಆದರೆ ಇದು ನಿಜವಲ್ಲ. ಒಎಸ್ಡಿಯಲ್ಲಿರುವ ಅಧಿಕಾರಿಗಳು ಮೂರು ವಿವಿಧ ರಾಜ್ಯಗಳು ಮತ್ತು ನಾಲ್ಕು ವಿಭಿನ್ನ ಜಾತಿಗೆ ಸೇರಿದವರು. ಇವರಲ್ಲಿ ಯಾರೊಬ್ಬರೂ ನನ್ನ ಕುಟುಂಬದವರಲ್ಲ. ಈ ನಾಲ್ಕು ಮಂದಿ ನನ್ನ ಜಾತಿ ಅಥವಾ ರಾಜ್ಯಕ್ಕೆ ಸೇರಿದವರಲ್ಲ’ ಎಂದು ಧನಕರ್ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.</p>.<p>‘ನಾನು ಪ್ರತಿಜ್ಞೆಯಂತೆ ಜನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ಧೇನೆ. ಇಷ್ಟೇ ಉತ್ಸಾಹದಿಂದ ಮುಂದೆಯೂ ಜನರ ಸೇವೆ ಮಾಡಲಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p>ಧನಕರ್ ಅವರನ್ನು ಅಂಕಲ್ ಜೀ ಎಂದು ಕರೆದ ಮಹುವಾ ಅವರು, ‘ಧನಕರ್ ಅವರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರನ್ನು ರಾಜಭವನದ ಒಎಸ್ಡಿಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರೊಂದಿಗೆ ಒಎಸ್ಡಿಗೆ ನೇಮಿಸಲಾದ ಸಿಬ್ಬಂದಿಯ ಹೆಸರಿನ ಪಟ್ಟಿಯನ್ನು ಭಾನುವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ತಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ರಾಜಭವನದ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ(ಒಎಸ್ಡಿ) ನೇಮಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮಾಡಿರುವ ಆರೋಪವನ್ನು ಧನ್ಕರ್ ತಳ್ಳಿ ಹಾಕಿದ್ದಾರೆ.</p>.<p>‘ಇದು ಸುಳ್ಳು ಸುದ್ದಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರಾಜಭವನದಲ್ಲಿ ವಿಶೇಷ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರಲ್ಲ’ ಎಂದು ಅವರು ಹೇಳಿದ್ದಾರೆ.</p>.<p>‘ಒಎಸ್ಡಿಗೆ ನೇಮಿಸಲಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರು ಎಂದು ಮಹುವಾ ಮೊಹಿತ್ರಾ ಅವರು ದೂರಿದ್ದಾರೆ. ಆದರೆ ಇದು ನಿಜವಲ್ಲ. ಒಎಸ್ಡಿಯಲ್ಲಿರುವ ಅಧಿಕಾರಿಗಳು ಮೂರು ವಿವಿಧ ರಾಜ್ಯಗಳು ಮತ್ತು ನಾಲ್ಕು ವಿಭಿನ್ನ ಜಾತಿಗೆ ಸೇರಿದವರು. ಇವರಲ್ಲಿ ಯಾರೊಬ್ಬರೂ ನನ್ನ ಕುಟುಂಬದವರಲ್ಲ. ಈ ನಾಲ್ಕು ಮಂದಿ ನನ್ನ ಜಾತಿ ಅಥವಾ ರಾಜ್ಯಕ್ಕೆ ಸೇರಿದವರಲ್ಲ’ ಎಂದು ಧನಕರ್ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.</p>.<p>‘ನಾನು ಪ್ರತಿಜ್ಞೆಯಂತೆ ಜನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ಧೇನೆ. ಇಷ್ಟೇ ಉತ್ಸಾಹದಿಂದ ಮುಂದೆಯೂ ಜನರ ಸೇವೆ ಮಾಡಲಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p>ಧನಕರ್ ಅವರನ್ನು ಅಂಕಲ್ ಜೀ ಎಂದು ಕರೆದ ಮಹುವಾ ಅವರು, ‘ಧನಕರ್ ಅವರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರನ್ನು ರಾಜಭವನದ ಒಎಸ್ಡಿಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರೊಂದಿಗೆ ಒಎಸ್ಡಿಗೆ ನೇಮಿಸಲಾದ ಸಿಬ್ಬಂದಿಯ ಹೆಸರಿನ ಪಟ್ಟಿಯನ್ನು ಭಾನುವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>