ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ‘ಒಂದು ಕಿ.ಮಿ ಬಳಿಕ ಯಾತ್ರೆ ರದ್ದು ಮಾಡುವ ನಿರ್ಧಾರದ ಬಗ್ಗೆ ಆಯೋಜಕರು ನಮಗೆ ತಿಳಿಸಿರಲಿಲ್ಲ. ಉಳಿದ ಯಾತ್ರೆ ಶಾಂತಿಯುತವಾಗಿತ್ತು. ಭದ್ರತಾ ಲೋಪ ನಡೆದೇ ಇಲ್ಲ. ನಾವು ಪೂರ್ಣ ಭದ್ರತೆ ನೀಡುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ತಪಾಸಣೆಗೆ ಒಳಗಾದ ಜನಸಮೂಹವನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಅನುಮತಿ ನೀಡಿದ್ದಾರೆ‘ ಎಂದು ಹೇಳಿದ್ದಾರೆ.