<p>ತಿರುವನಂತಪುರ: ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರ ತಿರುವನಂತಪುರ ನಿವಾಸದಲ್ಲಿ ಸತತ 24 ಗಂಟೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಶೋಧ ನಡೆಸಿದ್ದಾರೆ.</p>.<p>ಗುರುವಾರ ಬೆಳಗ್ಗೆ ಶೋಧ ಕಾರ್ಯ ಪೂರ್ಣಗೊಂಡಿದ್ದು, ಬೆಂಗಳೂರು ಡ್ರಗ್ ಪ್ರಕರಣವೊಂದರ ಆರೋಪಿಯ ಕ್ರೆಡಿಟ್ ಕಾರ್ಡ್ ಒಂದನ್ನು ಬಿನೀಶ್ ಕೋಣೆ ಯಲ್ಲಿ ಇ.ಡಿ ಅಧಿಕಾರಿಗಳೇ ತಂದಿಟ್ಟಿ ದ್ದಾರೆ ಎಂದು ಬಿನೀಶ್ ಅವರ ಪತ್ನಿ ಆರೋಪಿಸಿದ್ದಾರೆ. ‘ಶೋಧನಾ ವರದಿ<br />ಯೊಂದಕ್ಕೆ ಸಹಿ ಹಾಕುವಂತೆ ನನಗೆ ಇ.ಡಿ ಅಧಿಕಾರಿಗಳು ಒತ್ತಡ ಹೇರಿದರು. ಇದರಲ್ಲಿ ‘ಬೆಂಗಳೂರಿನ ಡ್ರಗ್ ಪ್ರಕರಣವೊಂದರ ಆರೋಪಿ ಮೊಹಮ್ಮದ್ ಅನೂಪ್ ಎಂಬವವನ ಕ್ರೆಡಿಟ್ ಕಾರ್ಡ್ ಬಿನೀಶ್ ಕೊಠಡಿಯಲ್ಲಿ ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಬಿನೀಶ್ ಅವರ ಕೊಠಡಿಯಿಂದ ಇ.ಡಿಗೆ ಏನೂ ದೊರೆತಿಲ್ಲ. ಈ ಕ್ರೆಡಿಟ್ ಕಾರ್ಡ್ ಅನ್ನು ಇ.ಡಿ ಅಧಿಕಾರಿಗಳೇ ತಂದಿಟ್ಟು, ನಂತರ ಕೊಠಡಿಯಲ್ಲಿ ದೊರಕಿದೆ ಎಂದು ಉಲ್ಲೇಖಿಸಿದ್ದಾರೆ ಎಂದು’ ಬಿನೀಶ್ ಪತ್ನಿ ರೆನಿಟಾ ಆರೋಪಿಸಿದರು.</p>.<p>‘ನಾನು ಈ ವರದಿಗೆ ಸಹಿ ಹಾಕಲು ನಿರಾಕರಿಸಿದೆ. ಈ ಸಂದರ್ಭದಲ್ಲಿ ಸಹಿ ಹಾಕಿದರಷ್ಟೇ ನಿಮ್ಮ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದ ಅಧಿಕಾರಿಗಳು ಸಹಿ ಹಾಕಲು ಒತ್ತಡ ಹಾಕಿದರು. ಆದರೆ ನಾನು ಸಹಿ ಹಾಕಿಲ್ಲ’ ಎಂದು ರೆನಿಟಾ ಹೇಳಿದರು.</p>.<p class="Subhead"><strong>ಇ.ಡಿ. ಅಧಿಕಾರಿಗಳನ್ನು ತಡೆದ ಪೊಲೀಸರು: </strong>ಬಿನೀಶ್ ಅವರ ಪತ್ನಿ, ಮಕ್ಕಳು ಹಾಗೂ ಅತ್ತೆಯನ್ನು ಇ.ಡಿ ಅಧಿಕಾರಿಗಳು ಅಕ್ರಮವಾಗಿ ಗೃಹಬಂಧನ ದಲ್ಲಿ ಇರಿಸಿದ್ದಾರೆ ಎಂದು ಸಂಬಂಧಿಕ ರೊಬ್ಬರು ದೂರು ನೀಡಿದ್ದರು. ಈ ದೂರು ಆಧರಿಸಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಮನೆಯಿಂದ ತೆರಳುತ್ತಿದ್ದ ಇ.ಡಿ ಅಧಿಕಾರಿಗಳನ್ನು ತಡೆದರು. ಈ ಕುರಿತು ಹೇಳಿಕೆಯನ್ನು ದಾಖಲಿಸುವ ಕುರಿತು ಇ.ಡಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ಸ್ಥಳದಿಂದ ತೆರಳಲು ಪೊಲೀಸರು ಅವಕಾಶ ನೀಡಿದ್ದಾರೆ.</p>.<p>ಮೂರು ವರ್ಷದ ಮಗು ಸೇರಿದಂತೆ ಕುಟುಂಬದ ಸದಸ್ಯರನ್ನು ಗೃಹಬಂಧನದಲ್ಲಿ ಇರಿಸಿರುವುದರ ಕುರಿತು ಸಂಬಂಧಿಕರು ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಿದ್ದರು. ಆಯೋಗದ ಸದಸ್ಯರೂ ಬಿನೀಶ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಆಯೋಗವನ್ನು ಭೇಟಿಯಾಗಲು ಇ.ಡಿ ಅಧಿಕಾರಿಗಳು ರೆನಿಟಾ, ಅವರ ಮಗಳು ಹಾಗೂ ತಾಯಿಗೆ ಅವಕಾಶ ನೀಡಿದ್ದರು. 24 ಗಂಟೆ ಇ.ಡಿ ಅಧಿಕಾರಿಗಳು ಮನೆಯಲ್ಲೇ ಇದ್ದ ಕಾರಣ ಮಗುವಿನ ಆರೈಕೆಗೆ ಅಡ್ಡಿಯಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿರುವನಂತಪುರ: ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರ ತಿರುವನಂತಪುರ ನಿವಾಸದಲ್ಲಿ ಸತತ 24 ಗಂಟೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಶೋಧ ನಡೆಸಿದ್ದಾರೆ.</p>.<p>ಗುರುವಾರ ಬೆಳಗ್ಗೆ ಶೋಧ ಕಾರ್ಯ ಪೂರ್ಣಗೊಂಡಿದ್ದು, ಬೆಂಗಳೂರು ಡ್ರಗ್ ಪ್ರಕರಣವೊಂದರ ಆರೋಪಿಯ ಕ್ರೆಡಿಟ್ ಕಾರ್ಡ್ ಒಂದನ್ನು ಬಿನೀಶ್ ಕೋಣೆ ಯಲ್ಲಿ ಇ.ಡಿ ಅಧಿಕಾರಿಗಳೇ ತಂದಿಟ್ಟಿ ದ್ದಾರೆ ಎಂದು ಬಿನೀಶ್ ಅವರ ಪತ್ನಿ ಆರೋಪಿಸಿದ್ದಾರೆ. ‘ಶೋಧನಾ ವರದಿ<br />ಯೊಂದಕ್ಕೆ ಸಹಿ ಹಾಕುವಂತೆ ನನಗೆ ಇ.ಡಿ ಅಧಿಕಾರಿಗಳು ಒತ್ತಡ ಹೇರಿದರು. ಇದರಲ್ಲಿ ‘ಬೆಂಗಳೂರಿನ ಡ್ರಗ್ ಪ್ರಕರಣವೊಂದರ ಆರೋಪಿ ಮೊಹಮ್ಮದ್ ಅನೂಪ್ ಎಂಬವವನ ಕ್ರೆಡಿಟ್ ಕಾರ್ಡ್ ಬಿನೀಶ್ ಕೊಠಡಿಯಲ್ಲಿ ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಬಿನೀಶ್ ಅವರ ಕೊಠಡಿಯಿಂದ ಇ.ಡಿಗೆ ಏನೂ ದೊರೆತಿಲ್ಲ. ಈ ಕ್ರೆಡಿಟ್ ಕಾರ್ಡ್ ಅನ್ನು ಇ.ಡಿ ಅಧಿಕಾರಿಗಳೇ ತಂದಿಟ್ಟು, ನಂತರ ಕೊಠಡಿಯಲ್ಲಿ ದೊರಕಿದೆ ಎಂದು ಉಲ್ಲೇಖಿಸಿದ್ದಾರೆ ಎಂದು’ ಬಿನೀಶ್ ಪತ್ನಿ ರೆನಿಟಾ ಆರೋಪಿಸಿದರು.</p>.<p>‘ನಾನು ಈ ವರದಿಗೆ ಸಹಿ ಹಾಕಲು ನಿರಾಕರಿಸಿದೆ. ಈ ಸಂದರ್ಭದಲ್ಲಿ ಸಹಿ ಹಾಕಿದರಷ್ಟೇ ನಿಮ್ಮ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದ ಅಧಿಕಾರಿಗಳು ಸಹಿ ಹಾಕಲು ಒತ್ತಡ ಹಾಕಿದರು. ಆದರೆ ನಾನು ಸಹಿ ಹಾಕಿಲ್ಲ’ ಎಂದು ರೆನಿಟಾ ಹೇಳಿದರು.</p>.<p class="Subhead"><strong>ಇ.ಡಿ. ಅಧಿಕಾರಿಗಳನ್ನು ತಡೆದ ಪೊಲೀಸರು: </strong>ಬಿನೀಶ್ ಅವರ ಪತ್ನಿ, ಮಕ್ಕಳು ಹಾಗೂ ಅತ್ತೆಯನ್ನು ಇ.ಡಿ ಅಧಿಕಾರಿಗಳು ಅಕ್ರಮವಾಗಿ ಗೃಹಬಂಧನ ದಲ್ಲಿ ಇರಿಸಿದ್ದಾರೆ ಎಂದು ಸಂಬಂಧಿಕ ರೊಬ್ಬರು ದೂರು ನೀಡಿದ್ದರು. ಈ ದೂರು ಆಧರಿಸಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಮನೆಯಿಂದ ತೆರಳುತ್ತಿದ್ದ ಇ.ಡಿ ಅಧಿಕಾರಿಗಳನ್ನು ತಡೆದರು. ಈ ಕುರಿತು ಹೇಳಿಕೆಯನ್ನು ದಾಖಲಿಸುವ ಕುರಿತು ಇ.ಡಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ಸ್ಥಳದಿಂದ ತೆರಳಲು ಪೊಲೀಸರು ಅವಕಾಶ ನೀಡಿದ್ದಾರೆ.</p>.<p>ಮೂರು ವರ್ಷದ ಮಗು ಸೇರಿದಂತೆ ಕುಟುಂಬದ ಸದಸ್ಯರನ್ನು ಗೃಹಬಂಧನದಲ್ಲಿ ಇರಿಸಿರುವುದರ ಕುರಿತು ಸಂಬಂಧಿಕರು ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಿದ್ದರು. ಆಯೋಗದ ಸದಸ್ಯರೂ ಬಿನೀಶ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಆಯೋಗವನ್ನು ಭೇಟಿಯಾಗಲು ಇ.ಡಿ ಅಧಿಕಾರಿಗಳು ರೆನಿಟಾ, ಅವರ ಮಗಳು ಹಾಗೂ ತಾಯಿಗೆ ಅವಕಾಶ ನೀಡಿದ್ದರು. 24 ಗಂಟೆ ಇ.ಡಿ ಅಧಿಕಾರಿಗಳು ಮನೆಯಲ್ಲೇ ಇದ್ದ ಕಾರಣ ಮಗುವಿನ ಆರೈಕೆಗೆ ಅಡ್ಡಿಯಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>