<p><strong>ನವದೆಹಲಿ</strong>: ಕಾಂಗ್ರೆಸ್, ಟಿಎಂಸಿ ಮತ್ತು ಎನ್ಸಿಪಿ ಸೇರಿ ಐದು ಪ್ರಮುಖ ಪಕ್ಷಗಳಿಗೆ ಸಂದಾಯವಾಗಿರುವ ದೇಣಿಗೆಗಿಂತ ಮೂರು ಪಟ್ಟು ಹೆಚ್ಚು ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಬಿಜೆಪಿಗೆ ಒಟ್ಟು ₹785.77 ಕೋಟಿ ಸಂದಾಯವಾಗಿದೆ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯು ಹೇಳಿದೆ.</p>.<p>ಚುನಾವಣಾ ಆಯೋಗಕ್ಕೆರಾಷ್ಟ್ರೀಯ ಪಕ್ಷಗಳು ಸಲ್ಲಿಸಿರುವ 2019–21ರ ಸಾಲಿನ ದೇಣಿಗೆ ವರದಿಯನ್ನು ಆಧರಿಸಿ, ₹20,000 ಮೇಲ್ಪಟ್ಟು ಸಲ್ಲಿಕೆಯಾಗಿರುವ ದೇಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಈ ವರದಿಯನ್ನು ಎಡಿಆರ್ ತಯಾರಿಸಿದೆ. ಬಿಜೆಪಿಗೆ ₹ 785.77 ಕೋಟಿ ದೇಣಿಗೆ ಸಿಕ್ಕಿದ್ದರೆ, ಕಾಂಗ್ರೆಸ್, ಎನ್ಸಿಪಿ, ಸಿಪಿಐ, ಸಿಪಿಎಂ ಮತ್ತು ಟಿಎಂಸಿಗೆ ಒಟ್ಟಾಗಿ ₹228 ಕೋಟಿ ಸಲ್ಲಿಕೆ ಆಗಿದೆ.</p>.<p>ಬಿಜೆಪಿಯು 570 ದಾನಿಗಳು ನೀಡಿರುವ ಒಟ್ಟು ₹149.8 ಕೋಟಿ ಮೊತ್ತದ ದೇಣಿಗೆಯನ್ನು ಘೋಷಿಸಿದೆ. ತೃಣಮೂಲ ಕಾಂಗ್ರೆಸ್ 52 ದಾನಿಗಳಿಂದ ₹7.1 ಕೋಟಿ, ಕಾಂಗ್ರೆಸ್ 25 ದಾನಿಗಳಿಂದ ₹2.6 ಕೋಟಿ ಮತ್ತು ಎನ್ಸಿಪಿ ಇಬ್ಬರು ದಾನಿಗಳಿಂದ ₹3 ಕೋಟಿ ದೇಣಿಗೆ ಪಡೆದಿರುವುದಾಗಿ ಘೋಷಿಸಿವೆ. ₹20 ಸಾವಿರಕ್ಕಿಂತ ಕಡಿಮೆ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಬೇಕಿಲ್ಲ.</p>.<p>ಮೇಯರ್ ಮತ್ತು ಉಪ ಮೇಯರ್ ಇಬ್ಬರೂ ಬಿಜೆಪಿಯವರೇ ಆಗಿರುವ ಮಹಾರಾಷ್ಟ್ರದ ಅಮರಾವತಿ ಮಹಾನಗರ ಪಾಲಿಕೆಯಿಂದಲೂ ₹4.80 ಲಕ್ಷ ದೇಣಿಗೆಯನ್ನುಬಿಜೆಪಿ ಪಡೆದಿದೆ. ಈ ದೇಣಿಗೆಗೆ ಸಂಬಂಧಪಟ್ಟಂತೆ ವಿಳಾಸ, ಬ್ಯಾಂಕ್ ಹೆಸರು, ಪ್ಯಾನ್ ಮಾಹಿತಿ ಸೇರಿ ಇತರ ಮಾಹಿತಿಗಳನ್ನು ಪಕ್ಷ ಒದಗಿಸಿಲ್ಲ. ಇಂಟರ್ನೆಟ್ನಲ್ಲಿ ಹುಡುಕಿದಾಗ ಈ ದೇಣಿಗೆಯು ಅಮರಾವತಿ ನಗರಪಾಲಿಕೆಯಿಂದ ಬಂದಿದೆ ಎಂದು ತಿಳಿದುಬಂದಿತು. ಒಂದು ರಾಜಕೀಯ ಪಕ್ಷ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸ್ಥೆಯೊಂದು ಪಕ್ಷಕ್ಕೆ ದೇಣಿಗೆ ನೀಡಿರುವುದು ಕಾನೂನು ಪ್ರಕಾರವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿವೆ ಎಂದು ಎಡಿಆರ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕಾಂಗ್ರೆಸ್, ಟಿಎಂಸಿ ಮತ್ತು ಎನ್ಸಿಪಿ ಸೇರಿ ಐದು ಪ್ರಮುಖ ಪಕ್ಷಗಳಿಗೆ ಸಂದಾಯವಾಗಿರುವ ದೇಣಿಗೆಗಿಂತ ಮೂರು ಪಟ್ಟು ಹೆಚ್ಚು ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಬಿಜೆಪಿಗೆ ಒಟ್ಟು ₹785.77 ಕೋಟಿ ಸಂದಾಯವಾಗಿದೆ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯು ಹೇಳಿದೆ.</p>.<p>ಚುನಾವಣಾ ಆಯೋಗಕ್ಕೆರಾಷ್ಟ್ರೀಯ ಪಕ್ಷಗಳು ಸಲ್ಲಿಸಿರುವ 2019–21ರ ಸಾಲಿನ ದೇಣಿಗೆ ವರದಿಯನ್ನು ಆಧರಿಸಿ, ₹20,000 ಮೇಲ್ಪಟ್ಟು ಸಲ್ಲಿಕೆಯಾಗಿರುವ ದೇಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಈ ವರದಿಯನ್ನು ಎಡಿಆರ್ ತಯಾರಿಸಿದೆ. ಬಿಜೆಪಿಗೆ ₹ 785.77 ಕೋಟಿ ದೇಣಿಗೆ ಸಿಕ್ಕಿದ್ದರೆ, ಕಾಂಗ್ರೆಸ್, ಎನ್ಸಿಪಿ, ಸಿಪಿಐ, ಸಿಪಿಎಂ ಮತ್ತು ಟಿಎಂಸಿಗೆ ಒಟ್ಟಾಗಿ ₹228 ಕೋಟಿ ಸಲ್ಲಿಕೆ ಆಗಿದೆ.</p>.<p>ಬಿಜೆಪಿಯು 570 ದಾನಿಗಳು ನೀಡಿರುವ ಒಟ್ಟು ₹149.8 ಕೋಟಿ ಮೊತ್ತದ ದೇಣಿಗೆಯನ್ನು ಘೋಷಿಸಿದೆ. ತೃಣಮೂಲ ಕಾಂಗ್ರೆಸ್ 52 ದಾನಿಗಳಿಂದ ₹7.1 ಕೋಟಿ, ಕಾಂಗ್ರೆಸ್ 25 ದಾನಿಗಳಿಂದ ₹2.6 ಕೋಟಿ ಮತ್ತು ಎನ್ಸಿಪಿ ಇಬ್ಬರು ದಾನಿಗಳಿಂದ ₹3 ಕೋಟಿ ದೇಣಿಗೆ ಪಡೆದಿರುವುದಾಗಿ ಘೋಷಿಸಿವೆ. ₹20 ಸಾವಿರಕ್ಕಿಂತ ಕಡಿಮೆ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಬೇಕಿಲ್ಲ.</p>.<p>ಮೇಯರ್ ಮತ್ತು ಉಪ ಮೇಯರ್ ಇಬ್ಬರೂ ಬಿಜೆಪಿಯವರೇ ಆಗಿರುವ ಮಹಾರಾಷ್ಟ್ರದ ಅಮರಾವತಿ ಮಹಾನಗರ ಪಾಲಿಕೆಯಿಂದಲೂ ₹4.80 ಲಕ್ಷ ದೇಣಿಗೆಯನ್ನುಬಿಜೆಪಿ ಪಡೆದಿದೆ. ಈ ದೇಣಿಗೆಗೆ ಸಂಬಂಧಪಟ್ಟಂತೆ ವಿಳಾಸ, ಬ್ಯಾಂಕ್ ಹೆಸರು, ಪ್ಯಾನ್ ಮಾಹಿತಿ ಸೇರಿ ಇತರ ಮಾಹಿತಿಗಳನ್ನು ಪಕ್ಷ ಒದಗಿಸಿಲ್ಲ. ಇಂಟರ್ನೆಟ್ನಲ್ಲಿ ಹುಡುಕಿದಾಗ ಈ ದೇಣಿಗೆಯು ಅಮರಾವತಿ ನಗರಪಾಲಿಕೆಯಿಂದ ಬಂದಿದೆ ಎಂದು ತಿಳಿದುಬಂದಿತು. ಒಂದು ರಾಜಕೀಯ ಪಕ್ಷ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸ್ಥೆಯೊಂದು ಪಕ್ಷಕ್ಕೆ ದೇಣಿಗೆ ನೀಡಿರುವುದು ಕಾನೂನು ಪ್ರಕಾರವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿವೆ ಎಂದು ಎಡಿಆರ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>