ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಆದಿತ್ಯನಾಥ ಅವರು ಉತ್ತರ ಪ್ರದೇಶದ ಜನರಿಗೆ ತಮ್ಮ ತಾಯ್ನಾಡಿನ ಬಗ್ಗೆ ಮಾಹಿತಿ ನೀಡಬೇಕು. ಆದಿತ್ಯನಾಥ ಅವರು ಸಂತರಾಗುವ ಮೊದಲು ಅವರ ಹೆಸರು ಅಜಯ್ ಬಿಶ್ತ್ ಎಂದಾಗಿತ್ತು. ಅವರು ಉತ್ತರಾಖಂಡದಿಂದ ಬಂದವರು. ಬಿಜೆಪಿಯು ಹೊರಗಿನವರನ್ನು ರಾಜ್ಯದ ಜನತೆಯ ಮೇಲೆ ಹೇರಿಕೆ ಮಾಡಿದೆ’ ಎಂದು ಹೇಳಿದ್ದಾರೆ.