ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ಉಗ್ರರು ಮಂಗಳವಾರ ನಡೆಸಿದ ಗುಂಡಿನ ದಾಳಿ ವೇಳೆ ಬಿಜೆಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ. ವಾರದೊಳಗೆ ಎರಡನೇ ಬಾರಿಗೆಈ ರೀತಿಯ ಪ್ರಕರಣ ನಡೆದಿದೆ.
ಮೃತಪಟ್ಟವರನ್ನು ಜಾವೇದ್ ಅಹ್ಮದ್ ದರ್ ಎಂದು ಹೇಳಲಾಗಿದೆ. ಅವರು, ಹೊಂಶಲಿಬಾಗ್ ವಿಧಾನಸಭೆ ಕ್ಷೇತ್ರದ ಉಸ್ತುವಾರಿಯಾಗಿದ್ದರು.
ಕಾಶ್ಮೀರದಲ್ಲಿ ಬಿಜೆಪಿಯ ಮಾಧ್ಯಮ ವಿಭಾಗದ ವಕ್ತಾರ ಮನ್ಸೂರ್ ಅಹಮದ್ ಈ ಘಟನೆಯನ್ನು ಖಂಡಿಸಿದ್ದಾರೆ. ʼಭಯೋತ್ಪಾದಕರು ನಡೆಸಿದ ಅಮಾನವೀಯ ಮತ್ತು ಹೇಡಿ ಕೃತ್ಯ ಇದಾಗಿದೆ.ದರ್ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಭರಿಸುವ ಶಕ್ತಿಯನ್ನುದೇವರು ಕರುಣಿಸಲಿ ಎಂದುಪ್ರಾರ್ಥಿಸುತ್ತೇನೆʼ ಎಂದಿದ್ದಾರೆ.