‘ದಾಳಿಯ ನಂತರ ಎನ್ಸಿಬಿ ಅಧಿಕಾರಿ ವಾಂಖೆಡೆ ಅವರು 8 ರಿಂದ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಒಂದು ವೇಳೆ 10 ಜನರನ್ನು ಹಿಡಿದಿದ್ದರೆ, ಇಬ್ಬರನ್ನು ಬಿಟ್ಟಿದ್ದು ಏಕೆ. ಆ ಇಬ್ಬರಲ್ಲಿ ಒಬ್ಬ ಬಿಜೆಪಿ ನಾಯಕರೊಬ್ಬರ ಬಾವ ಇದ್ದಾರೆ‘ ಎಂದು ಆರೋಪಿಸಿರುವ ಮಲಿಕ್, ‘ಪ್ರಕರಣದ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಅಧಿಕಾರಿಯೊಬ್ಬರು ಅಸ್ಪಷ್ಟವಾಗಿ ಹೇಗೆ ಉತ್ತರಿಸುತ್ತಾರೆ?‘ ಎಂದು ಪ್ರಶ್ನಿಸಿದ್ದಾರೆ.