ಪಕ್ಷದ ಏಳು ಘಟಕಗಳ ಎರಡು ದಿನಗಳ ಸಮಾವೇಶ ಉದ್ಘಾಟಿಸುವ ಸಲುವಾಗಿ ಶನಿವಾರ ಪಟ್ನಾಗೆ ಬಂದ ಅವರು, ಮಾರ್ಗ ಮಧ್ಯೆ ತಾವು ಓದಿದ್ದ ಕಾಲೇಜಿಗೆ ಭೇಟಿ ನೀಡಿದರು. ಇದೇ ವೇಳೆ ಎಐಎಸ್ಎ ಸದಸ್ಯರು ‘ಜೆ.ಪಿ. ನಡ್ಡಾ ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ವಾಪಸ್ ಪಡೆಯಬೇಕು ಹಾಗೂ ಪಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿವಿ ಮಾನ್ಯತೆ ಕೊಡಬೇಕು ಎಂಬ ಫಲಕಗಳನ್ನು ಪ್ರದರ್ಶಿಸಿದರು.