ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ವಿವಿಧ ಹುದ್ದೆಗಳಿಗೆ ಆರು ಮುಖಂಡರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕ ಮಾಡಿದ್ದಾರೆ. ನಸೀಮುದ್ದೀನ್ ಸಿದ್ದಿಖಿ, ಅಜಯ್ ರಾಯ್, ವೀರೇಂದ್ರ ಚೌಧರಿ, ನಕುಲ್ ದುಬೆ, ಅನಿಲ್ ಯಾದವ್ ಮತ್ತು ಯೋಗೇಶ್ ದೀಕ್ಷಿತ್ ಅವರು ಯುಪಿಸಿಸಿಗೆ ಹೊಸದಾಗಿ ನೇಮಕರಾಗಿರುವ ಮುಖಂಡರು.