ಲೋಕಸಭೆಯಲ್ಲಿ ದಿನದ ಕಲಾಪ ಆರಂಭವಾದ ಕೂಡಲೇ ಕಪ್ಪು ಅಂಗಿ, ಪಟ್ಟಿ, ಶಾಲು ಧರಿಸಿದ್ದ ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಸದಸ್ಯರಾದ ಟಿ.ಎನ್ ಪ್ರತಾಪನ್ ಹಾಗೂ ಹಿಬಿ ಇಡೆನ್ ಅವರು, ಆದೇಶ ಪತ್ರಗಳನ್ನು ಹಾಗೂ ಕಪ್ಪು ಪಟ್ಟಿಯನ್ನು ಸ್ಪೀಕರ್ ಕುರ್ಚಿಯ ಬಳಿ ತೂರಿದರು.