‘ಐದು ವರ್ಷಗಳಿಂದ ಈ ಸಮಸ್ಯೆ ಬಿಗಡಾಯಿಸಿದೆ. ಬೀಡಾಡಿ ದನಗಳಿಂದ ರೈತರು ಬಹಳನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇಲ್ಲಿ ಯೋಗಿ ಅವರ ಭಾಷಣ ನಿಗದಿಯಾಗಿತ್ತು. ಅಲ್ಲಿ ಬೀಡಾಡಿ ದನಗಳನ್ನು ಬಿಡಬೇಕು ಎಂದು ರೈತರು ನಿರ್ಧರಿಸಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಇರುವ ಎಲ್ಲಾ ಬೀಡಾಡಿ ದನಗಳನ್ನು ಒಂದೆಡೆ ಕೂಡಿ ಹಾಕಲಾಗಿತ್ತು. ಯೋಗಿ ಅವರ ಭಾಷಣ ನಡೆಯುತ್ತಿದ್ದ ವೇಳೆ, ಎಲ್ಲಾ ದನಗಳನ್ನು ಬಿಡಲಾಯಿತು’ ಎಂದು ಇಲ್ಲಿನ ರೈತ ನಾಯಕರಮಣ್ದೀಪ್ ಸಿಂಗ್ ಮನ್ ಎಂಬುವವರು ಟ್ವೀಟ್ ಮಾಡಿದ್ದಾರೆ. ನೂರಾರು ಬೀಡಾಡಿ ದನಗಳು ಮೈದಾನವೊಂದರತ್ತ ನುಗ್ಗುತ್ತಿರುವ ವಿಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ.