ಚೆನ್ನೈ: ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಬುರೆವಿ ಚಂಡಮಾರುತವು ತೀವ್ರತೆಯನ್ನು ಕಳೆದುಕೊಂಡಿದ್ದು, ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿದೆ.ಶುಕ್ರುವಾರ ಬೆಳಿಗ್ಗೆ ತಮಿಳುನಾಡಿ ರಾಮನಾಥಪುರ ಮತ್ತು ತೂತ್ತುಕುಡಿ ಬಳಿ ಭೂಸ್ಪರ್ಶ ಮಾಡಲಿದೆ. ಈ ವೇಳೆ ತಮಿಳುನಾಡು, ಕೇರಳದ ಹಲವೆಡೆ ಭಾರಿ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.