ಲಖನೌ: ಹಿಂದೂ ಧಾರ್ಮಿಕ ಕೃತಿ ‘ರಾಮಚರಿತ ಮಾನಸ’ ಕುರಿತು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ್ದ ಹೇಳಿಕೆ ಈಗ ರಾಜಕೀಯ ತಿರುವು ಪಡೆದಿದೆ. ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಇತರ ಹಿಂದುಳಿದ ವರ್ಗಗಳ(ಒಬಿಸಿ) ಕೆಲ ಸಂಘಟನೆಗಳು ಮೌರ್ಯ ಅವರಿಗೆ ಬೆಂಬಲ ಸೂಚಿಸಿವೆ. ಜೊತೆಗೆ, ಅವರನ್ನು ಬೆಂಬಲಿಸಿ ಲಖನೌನಲ್ಲಿ ಬುಧವಾರ ಪಾದಯಾತ್ರೆ ನಡೆಸುವುದಾಗಿಯೂ ಹೇಳಿವೆ.