ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರಕ್ಕೆ ₹28,655 ಕೋಟಿ ಸಬ್ಸಿಡಿ: ಸಚಿವ ಸಂಪುಟ ಒಪ್ಪಿಗೆ

Last Updated 13 ಅಕ್ಟೋಬರ್ 2021, 3:07 IST
ಅಕ್ಷರ ಗಾತ್ರ

ನವದೆಹಲಿ: ಬಿತ್ತನೆ ಅವಧಿಯಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಂಗಳವಾರ ಫಾಸ್ಫಟಿಕ್ ಮತ್ತು ಪೊಟ್ಯಾಶ್‌ (ಪಿ ಅಂಡ್‌ ಕೆ) ರಸಗೊಬ್ಬರಗಳಿಗೆ ₹28,655 ಕೋಟಿ ನಿವ್ವಳ ಸಹಾಯಧನ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) 2021ರ ಅಕ್ಟೋಬರ್ ನಿಂದ 2022ರ ಮಾರ್ಚ್‌ವರೆಗೆ ಫಾಸ್ಫಟಿಕ್‌ ಮತ್ತು ಪೊಟ್ಯಾಶ್ ರಸಗೊಬ್ಬರಗಳಿಗೆ ಸಬ್ಸಿಡಿ (ಎನ್‌ಬಿಎಸ್‌) ನೀಡಲಾಗುತ್ತದೆ.

ಹೆಚ್ಚುವರಿ ಸಬ್ಸಿಡಿಯು 2021-22ರರಬಿ ಋತುವಿನಲ್ಲಿ ರೈತರಿಗೆ ಎಲ್ಲ ಪಿ ಮತ್ತು ಕೆ ರಸಗೊಬ್ಬರಗಳು ಕೈಗೆಟುಕುವ ದರದಲ್ಲಿ ಸರಾಗವಾಗಿ ಲಭಿಸುವಂತೆ ಮಾಡಲು ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. 2021-22ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ ಸುಮಾರು ₹79,600 ಕೋಟಿ ನಿಗದಿಪಡಿಸಲಾಗಿದೆ. ಹೆಚ್ಚುವರಿ ಸಬ್ಸಿಡಿ ಒದಗಿಸಿದ ನಂತರ ಈ ಅಂಕಿಅಂಶ ಏರಿಕೆಯಾಗಬಹುದು ಎಂದು ಸರ್ಕಾರ ಮಂಗಳವಾರ ಹೇಳಿದೆ.

‘ಸಬ್ಸಿಡಿ ಮುಂದುವರಿಸುವ ಮೂಲಕ ಮತ್ತು ಡಿಎಪಿ ಹಾಗೂ ಹೆಚ್ಚಾಗಿ ಬಳಸುವ ಎನ್‌ಪಿಕೆ ಮೂರು ಗ್ರೇಡ್‌ ರಸಗೊಬ್ಬರಗಳಿಗೆ ಹೆಚ್ಚುವರಿ ಸಬ್ಸಿಡಿಗಳ ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ರೈತರು ಮತ್ತು ಕೃಷಿ ವಲಯವನ್ನು ಬೆಂಬಲಿಸಲಾಗುತ್ತಿದೆ. ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮೇಲೆ ಪ್ರತಿ ಚೀಲಕ್ಕೆ ₹438 ಮತ್ತು ಎನ್‌ಪಿಕೆ 10-26-26, ಎನ್‌ಪಿಕೆ 20-20-0-13 ಮತ್ತು ಎನ್‌ಪಿಕೆ 1 2-32-16 ಶ್ರೇಣಿಗೆ ಪ್ರತಿ ಚೀಲಕ್ಕೆ ₹100 ರೈತರಿಗೆ ಉಳಿತಾಯ ಮಾಡಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜೂನ್‌ನಲ್ಲಿ ಜಾಗತಿಕ ಬೆಲೆಯ ಏರಿಕೆಯ ಹೊರತಾಗಿಯೂ ಡಿಎಪಿಯ ಮೇಲಿನ ಸಬ್ಸಿಡಿಯನ್ನು ಸರ್ಕಾರವು ಪ್ರತಿ ಚೀಲಕ್ಕೆ (50 ಕೆ.ಜಿ. ಚೀಲ) ಶೇ 140ರಷ್ಟು ಹೆಚ್ಚಿಸಿದೆ. ಯೂರಿಯಾ ಮತ್ತು 24 ಶ್ರೇಣಿಗಳ ಪಿ ಮತ್ತು ಕೆ ರಸಗೊಬ್ಬರಗಳು ಸಬ್ಸಿಡಿ ದರದಲ್ಲಿ ಲಭಿಸುವಂತೆ ಮಾಡಲಾಗಿದೆ. ಪಿ ಮತ್ತು ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಎನ್‌ಬಿಎಸ್ ಯೋಜನೆಯಡಿ 2010ರ ಏಪ್ರಿಲ್‌ನಿಂದಲೂ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT