‘ರೈತರ ಹಿತದೃಷ್ಟಿಯಿಂದ ಭಾರತ ಜಾರಿಗೊಳಿಸಿರುವ ಆಮದು ಮೇಲಿನ ನಿರ್ಬಂಧವನ್ನು ಕೆನಡಾ ವಿರೋಧಿಸುತ್ತದೆ. ಆದರೆ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಭಾರತದ ಕೃಷಿ ನೀತಿಗಳನ್ನೇ ಪ್ರಶ್ನಿಸುತ್ತದೆ. ಭಾರತದ ರೈತರ ಬಗ್ಗೆ ಕೆನಡಾಕ್ಕೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಿಜಯ್ ಚೌಥೈವಾಲೆ ಟ್ವೀಟ್ ಮಾಡಿದ್ದಾರೆ.