ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ: 5 ಕೆ.ಜಿ. ಉಚಿತ ಧಾನ್ಯ ಮಾರ್ಚ್‌ವರೆಗೆ ವಿಸ್ತರಣೆ

Last Updated 25 ನವೆಂಬರ್ 2021, 2:51 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಅಡಿಯಲ್ಲಿ, ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ಐದು ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದನ್ನು 2022ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಈ ನಿರ್ಧಾರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹53,344 ಕೋಟಿ ಹೊರೆ ಬೀಳಲಿದೆ.ಈಗಿನ ವಿಸ್ತರಣೆಯಿಂದಾಗಿ ಯೋಜನೆಯ ಒಟ್ಟು ವೆಚ್ಚವು ₹2.6 ಲಕ್ಷ ಕೋಟಿಗೆ ಹೆಚ್ಚಲಿದೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್‌ಎ) ವ್ಯಾಪ್ತಿಯಲ್ಲಿ ಬರುವ 80 ಕೋಟಿಗೂ ಹೆಚ್ಚು ಜನರಿಗೆ ಯೋಜನೆಯಿಂದ ಅನುಕೂಲ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ
ತೆಗೆದುಕೊಳ್ಳಲಾಗಿದೆ.

ಕೋವಿಡ್‌ ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡಜನರಿಗೆ ನೆರವಾಗುವುದಕ್ಕಾಗಿ 2020ರ ಮಾರ್ಚ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಎನ್‌ಎಫ್‌ಎಸ್‌ಎ ಅಡಿಯಲ್ಲಿ ₹2ರಿಂದ ₹3ರ ದರದಲ್ಲಿ ಜನರಿಗೆ ನೀಡಲಾಗುತ್ತಿರುವ ಆಹಾರ ಧಾನ್ಯದ ಜತೆಗೆ ಹೆಚ್ಚುವರಿಯಾಗಿ ಐದು ಕೆ.ಜಿಯನ್ನು ನೀಡಲಾಗುತ್ತಿದೆ.

ಈ ಹಿಂದೆ, ಹಲವು ಬಾರಿ ಈ ಯೋಜನೆ ಅವಧಿ ವಿಸ್ತರಣೆ ನಡೆದಿದೆ.

ಯೋಜನೆಯ ಮೊದಲ ಹಂತವು 2020ರ ಏಪ್ರಿಲ್‌–ಜೂನ್‌, ಎರಡನೇ ಹಂತವು 2020ರ ಜುಲೈ–ನವೆಂಬರ್‌, ಮೂರನೇ ಹಂತವು 2021ರ ಮೇ–ಜೂನ್‌ ಮತ್ತು ನಾಲ್ಕನೇ ಹಂತವು 2021ರ ಜುಲೈ–ನವೆಂಬರ್‌ವರೆಗೆ ಜಾರಿಯ
ಲ್ಲಿತ್ತು. ಈ ತಿಂಗಳಲ್ಲಿ ಯೋಜನೆಯು ಕೊನೆಯಾಗಬೇಕಿತ್ತು. ಈಗ, ಇನ್ನೂನಾಲ್ಕು ತಿಂಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT