<p class="title"><strong>ತವಾಂಗ್, ಅರುಣಾಚಲ ಪ್ರದೇಶ: </strong>‘ಟಿಬೆಟ್ನ ಮುಂದಿನ ದಲೈ ಲಾಮಾ ಅವರನ್ನು ಆಯ್ಕೆ ಮಾಡುವುದಕ್ಕೆ ಚೀನಾಕ್ಕೆ ಯಾವುದೇ ಅಧಿಕಾರವಿಲ್ಲ’ ಎಂದು ಅರುಣಾಚಲ ಪ್ರದೇಶದ ತವಾಂಗ್ ಮಠದ ಮುಖ್ಯಸ್ಥ ಗ್ಯಾಂಗ್ಬಂಗ್ ರಿನ್ಪೋಚೆ ಹೇಳಿದ್ದಾರೆ.</p>.<p class="title">ಟಿಬೆಟ್ನ ಲಾಸಾದಲ್ಲಿನ ಪೊಟಾಲಾ ಅರಮನೆಯ ನಂತರ ವಿಶ್ವದ ಎರಡನೇ ಅತಿದೊಡ್ಡ ಮಠದ ಮುಖ್ಯಸ್ಥರಾಗಿರುವ ರಿನ್ಪೋಚೆ ಅವರು, ‘ಟಿಬೆಟನ್ ಆಧ್ಯಾತ್ಮಿಕ ನಾಯಕನ ಉತ್ತರಾಧಿಕಾರಿಯ ನೇಮಕದ ಬಗ್ಗೆ ನಿರ್ಧರಿಸಲು ಪ್ರಸ್ತುತ ದಲೈ ಲಾಮಾ ಮತ್ತು ಟಿಬೆಟನ್ ಜನರಿಗೆ ಮಾತ್ರ ಹಕ್ಕಿದೆ. ಚೀನಾಕ್ಕೆ ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ’ ಎಂದು ಹೇಳಿದರು.</p>.<p class="title">‘ಚೀನಾ ಸರ್ಕಾರಕ್ಕೆ ಧರ್ಮದಲ್ಲಿ ನಂಬಿಕೆ ಇಲ್ಲ. ಧರ್ಮದಲ್ಲಿ ನಂಬಿಕೆ ಇಲ್ಲದ ಸರ್ಕಾರ ಮುಂದಿನ ದಲೈ ಲಾಮಾ ಅವರನ್ನು ಹೇಗೆ ನಿರ್ಧರಿಸುತ್ತದೆ. ಉತ್ತರಾಧಿಕಾರಿಯ ನೇಮಕವು ಧರ್ಮ ಮತ್ತು ನಂಬಿಕೆಯ ವಿಷಯವಾಗಿದೆ. ಇದು ರಾಜಕೀಯ ವಿಷಯವಲ್ಲ’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.</p>.<p class="title">‘ಬೀಜಿಂಗ್ನ ವಿಸ್ತರಣಾ ನೀತಿಯನ್ನು ಎದುರಿಸುವುದು ಮುಖ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಕಟ್ಟುನಿಟ್ಟಾದ ಜಾಗೃತಿ ಕಾಯ್ದುಕೊಳ್ಳಬೇಕು’ ಎಂದೂ ಅವರು ಭಾರತಕ್ಕೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ತವಾಂಗ್, ಅರುಣಾಚಲ ಪ್ರದೇಶ: </strong>‘ಟಿಬೆಟ್ನ ಮುಂದಿನ ದಲೈ ಲಾಮಾ ಅವರನ್ನು ಆಯ್ಕೆ ಮಾಡುವುದಕ್ಕೆ ಚೀನಾಕ್ಕೆ ಯಾವುದೇ ಅಧಿಕಾರವಿಲ್ಲ’ ಎಂದು ಅರುಣಾಚಲ ಪ್ರದೇಶದ ತವಾಂಗ್ ಮಠದ ಮುಖ್ಯಸ್ಥ ಗ್ಯಾಂಗ್ಬಂಗ್ ರಿನ್ಪೋಚೆ ಹೇಳಿದ್ದಾರೆ.</p>.<p class="title">ಟಿಬೆಟ್ನ ಲಾಸಾದಲ್ಲಿನ ಪೊಟಾಲಾ ಅರಮನೆಯ ನಂತರ ವಿಶ್ವದ ಎರಡನೇ ಅತಿದೊಡ್ಡ ಮಠದ ಮುಖ್ಯಸ್ಥರಾಗಿರುವ ರಿನ್ಪೋಚೆ ಅವರು, ‘ಟಿಬೆಟನ್ ಆಧ್ಯಾತ್ಮಿಕ ನಾಯಕನ ಉತ್ತರಾಧಿಕಾರಿಯ ನೇಮಕದ ಬಗ್ಗೆ ನಿರ್ಧರಿಸಲು ಪ್ರಸ್ತುತ ದಲೈ ಲಾಮಾ ಮತ್ತು ಟಿಬೆಟನ್ ಜನರಿಗೆ ಮಾತ್ರ ಹಕ್ಕಿದೆ. ಚೀನಾಕ್ಕೆ ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ’ ಎಂದು ಹೇಳಿದರು.</p>.<p class="title">‘ಚೀನಾ ಸರ್ಕಾರಕ್ಕೆ ಧರ್ಮದಲ್ಲಿ ನಂಬಿಕೆ ಇಲ್ಲ. ಧರ್ಮದಲ್ಲಿ ನಂಬಿಕೆ ಇಲ್ಲದ ಸರ್ಕಾರ ಮುಂದಿನ ದಲೈ ಲಾಮಾ ಅವರನ್ನು ಹೇಗೆ ನಿರ್ಧರಿಸುತ್ತದೆ. ಉತ್ತರಾಧಿಕಾರಿಯ ನೇಮಕವು ಧರ್ಮ ಮತ್ತು ನಂಬಿಕೆಯ ವಿಷಯವಾಗಿದೆ. ಇದು ರಾಜಕೀಯ ವಿಷಯವಲ್ಲ’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.</p>.<p class="title">‘ಬೀಜಿಂಗ್ನ ವಿಸ್ತರಣಾ ನೀತಿಯನ್ನು ಎದುರಿಸುವುದು ಮುಖ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಕಟ್ಟುನಿಟ್ಟಾದ ಜಾಗೃತಿ ಕಾಯ್ದುಕೊಳ್ಳಬೇಕು’ ಎಂದೂ ಅವರು ಭಾರತಕ್ಕೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>