ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ‘ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ,’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಾಳ್ವೆ ಉತ್ತರ ಕೇಳಿ ಕೆಂಡಾಮಂಡಲಗೊಂಡ ನ್ಯಾಯಾದೀಶರು, ‘ ದೇಶದ ಬೇರೆ ಆರೋಪಿಗಳಿಗೂ ಹೀಗೇ ವಿಚಾರಣೆಗೆ ಬರುವಂತೆ ಆಮಂತ್ರಣ ನೀಡುವಿರಾ’ ಎಂದು ಕೇಳಿದರು.