‘ರಸ್ತೆ ಅಪಘಾತಗಳನ್ನು ಶೇ 50ರಷ್ಟು ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದ್ದೇವು. ತಮಿಳುನಾಡಿನಲ್ಲಿ ಅಪಘಾತ ನಿಯಂತ್ರಣದ ಪ್ರಮಾಣ ಶೇ 53ರಷ್ಟಿದೆ. 2030ರವರೆಗೆ ಕಾಯುತ್ತಿದ್ದರೆ, 6–7 ಲಕ್ಷ ಜನ ಸಾಯುತ್ತಾರೆ. ಹಾಗಾಗಿ, ಜನರ ಭಾಗವಹಿಸುವಿಕೆಯ ಮೂಲಕ 2025ರೊಳಗೆ ಅಪಘಾತಗಳ ಪ್ರಮಾಣವನ್ನು ಶೇಕಡ 50 ರಷ್ಟು ತಗ್ಗಿಸಲು ನಾವು ಬದ್ಧರಾಗಿದ್ದೇವೆ’ ಎಂದರು.