'ಸುದೀರ್ಘ ಚರ್ಚೆಯ ನಂತರ ಭಾರತದ ಸಂಸತ್ತು ಈ ಕಾಯ್ದೆಗಳಿಗೆ ಅನುಮೋದನೆ ನೀಡಿದೆ. ಈ ಕಾಯ್ದೆಗಳು ರೈತರ ಸಮಸ್ಯೆಗಳನ್ನು ಈಡೇರಿಸಿವೆ. ಈ ಹಿಂದೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ಹಲವು ತಿಂಗಳ ನಂತರ ಹಣ ಪಡೆಯುವ ಸ್ಥಿತಿ ಇತ್ತು. ಈಗ ಉತ್ಪನ್ನ ಮಾರಾಟದ ನಂತರದ ಮೂರು ದಿನಗಳಲ್ಲಿ ರೈತರಿಗೆ ಹಣ ನೀಡಬೇಕು. ಇಲ್ಲದಿದ್ದರೆ ರೈತರು ದೂರು ನೀಡಲು ಅವಕಾಶವಿದೆ. ಈ ಕಾಯ್ದೆಗಳು ರೈತರಿಗೆ ಅವರ ಹಕ್ಕುಗಳು ದೊರೆಯುವಂತೆ ಮಾಡಿವೆ' ಎಂದು ಮೋದಿ ವಿವರಿಸಿದ್ದಾರೆ.