<p class="title"><strong>ನವದೆಹಲಿ:</strong> ‘ರಾಷ್ಟ್ರಪಿತ ಬದುಕಿಲ್ಲ ಎಂಬುದು ಹಿಂದೂತ್ವವಾದಿಗಳ ನಂಬಿಕೆ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಮಹಾತ್ಮ ಗಾಂಧಿ ಜೀವಂತವಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಅಭಿಪ್ರಾಯಪಟ್ಟರು.</p>.<p>‘ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಟ್ಟು ಕೊಂದ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಬಾಪು ಜೀವಂತವಾಗಿ ಇರುತ್ತಾರೆ’ ಅವರು ಟ್ವೀಟ್ ಮಾಡಿದ್ದಾರೆ. ರಾಜಘಾಟ್ನಲ್ಲಿ ಅವರು ಪುಷ್ಪನಮನ ಸಲ್ಲಿಸಿದರು.</p>.<p>‘ನನ್ನ ಸಾವಿನ ನಂತರವೂ, ಪ್ರೀತಿ ಮತ್ತು ಸತ್ಯಕ್ಕೆ ಎಲ್ಲಿ ಜಯ ಇರುತ್ತದೆಯೊ ಆಗೆಲ್ಲಾ ಇತಿಹಾಸ ನನ್ನನ್ನು ಸ್ಮರಿಸುತ್ತದೆ’ ಎಂಬ ಗಾಂಧೀಜಿ ಅವರ ಹೇಳಿಕೆಯನ್ನು ಅವರು ಟ್ವೀಟ್ ಜೊತೆಗೆ ಹಂಚಿಕೊಂಡಿದ್ದಾರೆ.</p>.<p>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಗಾಂಧೀಜಿ ಅವರ ವ್ಯಕ್ತಿತ್ವ, ಸೇವೆಯನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ‘ರಾಷ್ಟ್ರಪಿತ ಬದುಕಿಲ್ಲ ಎಂಬುದು ಹಿಂದೂತ್ವವಾದಿಗಳ ನಂಬಿಕೆ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಮಹಾತ್ಮ ಗಾಂಧಿ ಜೀವಂತವಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಅಭಿಪ್ರಾಯಪಟ್ಟರು.</p>.<p>‘ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಟ್ಟು ಕೊಂದ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಬಾಪು ಜೀವಂತವಾಗಿ ಇರುತ್ತಾರೆ’ ಅವರು ಟ್ವೀಟ್ ಮಾಡಿದ್ದಾರೆ. ರಾಜಘಾಟ್ನಲ್ಲಿ ಅವರು ಪುಷ್ಪನಮನ ಸಲ್ಲಿಸಿದರು.</p>.<p>‘ನನ್ನ ಸಾವಿನ ನಂತರವೂ, ಪ್ರೀತಿ ಮತ್ತು ಸತ್ಯಕ್ಕೆ ಎಲ್ಲಿ ಜಯ ಇರುತ್ತದೆಯೊ ಆಗೆಲ್ಲಾ ಇತಿಹಾಸ ನನ್ನನ್ನು ಸ್ಮರಿಸುತ್ತದೆ’ ಎಂಬ ಗಾಂಧೀಜಿ ಅವರ ಹೇಳಿಕೆಯನ್ನು ಅವರು ಟ್ವೀಟ್ ಜೊತೆಗೆ ಹಂಚಿಕೊಂಡಿದ್ದಾರೆ.</p>.<p>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಗಾಂಧೀಜಿ ಅವರ ವ್ಯಕ್ತಿತ್ವ, ಸೇವೆಯನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>