<p><strong>ಆಗ್ರಾ: </strong>ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಮೂರೇ ನಿಮಿಷಗಳಲ್ಲಿ ಮನವೊಲಿಸುವಲ್ಲಿ ರೂಪಾಲಿ ದೀಕ್ಷಿತ್ ಯಶಸ್ವಿಯಾಗಿದ್ದಾರೆ.</p>.<p>ಈ ಕುರಿತು ರೂಪಾಲಿ ಅವರೇ ಹೇಳಿಕೊಂಡಿದ್ದಾರೆ. ತನ್ನ ತಂದೆ ಮತ್ತು ಠಾಕೂರ್ ಸಮುದಾಯವನ್ನು ಅವಮಾನಿಸಿದ ಬಿಜೆಪಿ ಅಭ್ಯರ್ಥಿ ಚೋಟೆಲಾಲ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ರೂಪಾಲಿ ಹೇಳಿದ್ದಾರೆ.</p>.<p>‘ನಾನು ಅಖೀಲೇಶ್ರನ್ನು ಭೇಟಿ ಆದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ನಾನು ಕಣಕ್ಕಿಳಿಯಬೇಕಿದೆ. ನಾನು ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆ ನೀಡಿದೆ. ಅಖಿಲೇಶ್ ಅವರು ನನಗೆ ಟಿಕೆಟ್ ನೀಡಿದರು’ ಎಂದು ರೂಪಾಲಿ ಹೇಳಿದ್ದಾರೆ.</p>.<p>ರೂಪಾಲಿಗೆ ಟಿಕೆಟ್ ನೀಡುವ ಸಲುವಾಗಿ, ಈ ಮೊದಲು ಟಿಕೆಟ್ ನೀಡಿದ್ದ ಅಭ್ಯರ್ಥಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.</p>.<p>ರೂಪಾಲಿ ಅವರು ಕಾನೂನು ಪದವೀಧರರು. ಬ್ರಿಟನ್ನ ಎರಡು ವಿಶ್ವವಿದ್ಯಾಲಯಗಳಿಂದ ಎಂಬಿಎ ಮತ್ತು ಎಂಎ ಪದವಿ ಪಡೆದಿದ್ದಾರೆ. ಮೂರು ವರ್ಷಗಳ ಕಾಲ ದುಬೈನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಎಸ್ಪಿ ಸೇರುವ ಮೊದಲು ಅವರು ಬಿಜೆಪಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಗ್ರಾ: </strong>ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಮೂರೇ ನಿಮಿಷಗಳಲ್ಲಿ ಮನವೊಲಿಸುವಲ್ಲಿ ರೂಪಾಲಿ ದೀಕ್ಷಿತ್ ಯಶಸ್ವಿಯಾಗಿದ್ದಾರೆ.</p>.<p>ಈ ಕುರಿತು ರೂಪಾಲಿ ಅವರೇ ಹೇಳಿಕೊಂಡಿದ್ದಾರೆ. ತನ್ನ ತಂದೆ ಮತ್ತು ಠಾಕೂರ್ ಸಮುದಾಯವನ್ನು ಅವಮಾನಿಸಿದ ಬಿಜೆಪಿ ಅಭ್ಯರ್ಥಿ ಚೋಟೆಲಾಲ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ರೂಪಾಲಿ ಹೇಳಿದ್ದಾರೆ.</p>.<p>‘ನಾನು ಅಖೀಲೇಶ್ರನ್ನು ಭೇಟಿ ಆದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ನಾನು ಕಣಕ್ಕಿಳಿಯಬೇಕಿದೆ. ನಾನು ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆ ನೀಡಿದೆ. ಅಖಿಲೇಶ್ ಅವರು ನನಗೆ ಟಿಕೆಟ್ ನೀಡಿದರು’ ಎಂದು ರೂಪಾಲಿ ಹೇಳಿದ್ದಾರೆ.</p>.<p>ರೂಪಾಲಿಗೆ ಟಿಕೆಟ್ ನೀಡುವ ಸಲುವಾಗಿ, ಈ ಮೊದಲು ಟಿಕೆಟ್ ನೀಡಿದ್ದ ಅಭ್ಯರ್ಥಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.</p>.<p>ರೂಪಾಲಿ ಅವರು ಕಾನೂನು ಪದವೀಧರರು. ಬ್ರಿಟನ್ನ ಎರಡು ವಿಶ್ವವಿದ್ಯಾಲಯಗಳಿಂದ ಎಂಬಿಎ ಮತ್ತು ಎಂಎ ಪದವಿ ಪಡೆದಿದ್ದಾರೆ. ಮೂರು ವರ್ಷಗಳ ಕಾಲ ದುಬೈನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಎಸ್ಪಿ ಸೇರುವ ಮೊದಲು ಅವರು ಬಿಜೆಪಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>