<p><strong>ಲಖನೌ:</strong> ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭವಾಗಿದೆ.<br />ನೌಗಾಂವ್ ಸದತ್, ತುಂಡ್ಲಾ, ಬಂಗರ್ಮೌ, ಬುಲಂದ್ಶಹರ್, ಡಿಯೊರಿಯಾ, ಘಟಂಪುರ್ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು 88 ಅಭ್ಯರ್ಥಿಗಳು ಕಣದಲ್ಲಿದ್ದಾರೆ.</p>.<p>ಮಹಲಾನಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಧಿಪತ್ಯವಿದ್ದು ಇನ್ನುಳಿದ ಸೀಟುಗಳು ಬಿಜೆಪಿ ಪ್ರಾಬಲ್ಯವಿರುವುದಾಗಿದೆ.<br /><br />ನೌಗಾಂವ್ ಸದತ್ ಕ್ಷೇತ್ರದಲ್ಲಿ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ನಿಧನದಿಂದ ಸೀಟು ತೆರವಾಗಿತ್ತು. ಕಾನ್ಪುರ್ ನಗರ ಜಿಲ್ಲೆಯ ಘಟಂಪುರ್ ಕ್ಷೇತ್ರ ಸಚಿವೆ ಕಮಲ್ ರಾನಿ ವರುಣ್ ಅವರ ನಿಧನದಿಂದ ತೆರವಾಗಿತ್ತು.ಈ ಇಬ್ಬರು ಸಚಿವರು ಕೋವಿಡ್ನಿಂದ ಮೃತಪಟ್ಟಿದ್ದರು.</p>.<p>ತುಂಡ್ಲಾ ಕ್ಷೇತ್ರದಲ್ಲಿ ಶಾಸಕ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಈ ಸೀಟು ತೆರವಾಗಿತ್ತು. ಅದೇ ವೇಳೆ ಉನ್ನಾವ್ನ ಬಂಗರ್ಮೌ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಕಾರಣ ಇಲ್ಲಿ ಉಪಚುನಾವಣೆ ನಡೆದಿದೆ.</p>.<p>ಬುಲಂದ್ಶಹರ್, ಡಿಯೊರಿಯಾ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ವಿರೇಂದ್ರ ಸಿಂಗ್ ಸಿರೋಹಿ, ಜನಮೇಜಯ್ ಸಿಂಗ್ ಮತ್ತು ಪ್ರಶಾಂತ್ ಯಾದವ್ ನಿಧನದಿಂದ ಸೀಟು ತೆರವಾಗಿತ್ತು.<br /><br />ಬುಲಂದ್ಶಹರ್ ಕ್ಷೇತ್ರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿಯ ಮೊಹಮ್ಮದ್ ಯಮೀನ್ ಕಣದಲ್ಲಿದ್ದಾರೆ. ಬುಲಂದ್ಶಹರ್ನಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದು, ಘಟಂಪುರ್ನಲ್ಲಿ ಅತೀ ಕಡಿಮೆ ಎಂದರೆ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.</p>.<p>ಮಹಲಾನಿ -16 , ನೌಗಾಂನ್ ಸದತ್ ಮತ್ತು ಡಿಯೊರಿಯಾ - 10, ಬಂಗರ್ಮೌ ಮತ್ತು ತುಂಡ್ಲಾದಲ್ಲಿ ತಲಾ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭವಾಗಿದೆ.<br />ನೌಗಾಂವ್ ಸದತ್, ತುಂಡ್ಲಾ, ಬಂಗರ್ಮೌ, ಬುಲಂದ್ಶಹರ್, ಡಿಯೊರಿಯಾ, ಘಟಂಪುರ್ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು 88 ಅಭ್ಯರ್ಥಿಗಳು ಕಣದಲ್ಲಿದ್ದಾರೆ.</p>.<p>ಮಹಲಾನಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಧಿಪತ್ಯವಿದ್ದು ಇನ್ನುಳಿದ ಸೀಟುಗಳು ಬಿಜೆಪಿ ಪ್ರಾಬಲ್ಯವಿರುವುದಾಗಿದೆ.<br /><br />ನೌಗಾಂವ್ ಸದತ್ ಕ್ಷೇತ್ರದಲ್ಲಿ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ನಿಧನದಿಂದ ಸೀಟು ತೆರವಾಗಿತ್ತು. ಕಾನ್ಪುರ್ ನಗರ ಜಿಲ್ಲೆಯ ಘಟಂಪುರ್ ಕ್ಷೇತ್ರ ಸಚಿವೆ ಕಮಲ್ ರಾನಿ ವರುಣ್ ಅವರ ನಿಧನದಿಂದ ತೆರವಾಗಿತ್ತು.ಈ ಇಬ್ಬರು ಸಚಿವರು ಕೋವಿಡ್ನಿಂದ ಮೃತಪಟ್ಟಿದ್ದರು.</p>.<p>ತುಂಡ್ಲಾ ಕ್ಷೇತ್ರದಲ್ಲಿ ಶಾಸಕ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಈ ಸೀಟು ತೆರವಾಗಿತ್ತು. ಅದೇ ವೇಳೆ ಉನ್ನಾವ್ನ ಬಂಗರ್ಮೌ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಕಾರಣ ಇಲ್ಲಿ ಉಪಚುನಾವಣೆ ನಡೆದಿದೆ.</p>.<p>ಬುಲಂದ್ಶಹರ್, ಡಿಯೊರಿಯಾ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ವಿರೇಂದ್ರ ಸಿಂಗ್ ಸಿರೋಹಿ, ಜನಮೇಜಯ್ ಸಿಂಗ್ ಮತ್ತು ಪ್ರಶಾಂತ್ ಯಾದವ್ ನಿಧನದಿಂದ ಸೀಟು ತೆರವಾಗಿತ್ತು.<br /><br />ಬುಲಂದ್ಶಹರ್ ಕ್ಷೇತ್ರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿಯ ಮೊಹಮ್ಮದ್ ಯಮೀನ್ ಕಣದಲ್ಲಿದ್ದಾರೆ. ಬುಲಂದ್ಶಹರ್ನಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದು, ಘಟಂಪುರ್ನಲ್ಲಿ ಅತೀ ಕಡಿಮೆ ಎಂದರೆ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.</p>.<p>ಮಹಲಾನಿ -16 , ನೌಗಾಂನ್ ಸದತ್ ಮತ್ತು ಡಿಯೊರಿಯಾ - 10, ಬಂಗರ್ಮೌ ಮತ್ತು ತುಂಡ್ಲಾದಲ್ಲಿ ತಲಾ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>