ವಿಚಾರಣೆ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ ಅವರು, ಮೊಬೈಲ್ ಡಾಟಾ, ಬ್ಯಾಂಕ್ ವಿವರಗಳು, ಕೆಲವರ ಜೊತೆಗಿನ ಸಂಪರ್ಕ ಕುರಿತು ವಿಚಾರಣೆ ನಡೆಸಬೇಕಿದೆ. ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು. ‘ನಾನು ಉತ್ಪಾದಕನಲ್ಲ, ಜನರಿಗೆ ನೆರವಾಗಲು ನಾನು ಮ್ಯಾಟ್ರಿಕ್ಸ್ ಕಂಪನಿಯಿಂದ ಯಂತ್ರಗಳನ್ನು ಪಡೆದಿದ್ದೆ. ಪೊಲೀಸರು ನನ್ನಿಂದ ಕೋವಿಡ್ ಕೇಂದ್ರಗಳಿಗೆ ನೆರವು ಪಡೆದಿದ್ದರು’ ಎಂದು ಉದ್ಯಮಿ ತಿಳಿಸಿದ್ದರು.