<p><strong>ನವದೆಹಲಿ:</strong> ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸೋಮವಾರದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಉಚಿತ ಲಸಿಕೆ ಶಿಬಿರಗಳನ್ನು ಪ್ರಾರಂಭಿಸಲಿದ್ದಾರೆ.</p>.<p>ಗೌತಮ್ ಗಂಭೀರ್ ಫೌಂಡೇಷನ್ ಮಾಹಿತಿ ಪ್ರಕಾರ, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲಾಗುವುದು. ಅದರಿಂದಲೇ ಎಲ್ಲ ಖರ್ಚುಗಳನ್ನು ಭರಿಸಲಾಗುವುದು ಎಂದಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾವು ಸೋಮವಾರದಿಂದ ಕೋವಿಡ್ ಉಚಿತ ವ್ಯಾಕ್ಸಿನೇಷನ್ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ದೆಹಲಿಯ ಜನತೆಗೆ ಸಂಪೂರ್ಣವಾಗಿ ಲಸಿಕೆ ಲಭ್ಯವಾಗುವ ವರೆಗೂ ನಾವು ಈ ಶಿಬಿರಗಳನ್ನು ಮುಂದುವರಿಸುತ್ತೇವೆ. ನಮ್ಮ ಸಹಾಯಾರ್ಥ ಸಂಸ್ಥೆಯು ಈ ಹಿಂದೆಯೂ ಜನರಿಗೆ ನೆರವಾಗಿದ್ದು, ದೆಹಲಿ ಜನತೆಯ ಪ್ರಾಣ ಉಳಿಸುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/delhi-markets-to-open-on-odd-even-basis-from-monday-metro-to-run-at-50-pc-capacity-arvind-kejriwal-836209.html" itemprop="url">ದೆಹಲಿಯಲ್ಲಿ ಲಾಕ್ಡೌನ್ ಸಡಿಲಿಕೆ: ಸಮ–ಬೆಸ ಸಂಖ್ಯೆಯಲ್ಲಿ ತೆರೆಯಲು ಅವಕಾಶ </a></p>.<p>ಸ್ಲಮ್ ಕ್ಲಸ್ಟರ್ಗಳಲ್ಲೂ ಶಿಬಿರಗಳನ್ನು ಪ್ರಾರಂಭಿಸಲಾಗುವುದು ಎಂದು ಗಂಭೀರ್ ತಿಳಿಸಿದ್ದಾರೆ.</p>.<p>ನಾವು ವ್ಯಾಕ್ಸಿನೇಷನ್ ಶಿಬಿರಗಳನ್ನು ವಿಸ್ತರಿಸಲಿದ್ದೇವೆ. ಅದನ್ನು ಕ್ಲಸ್ಟರ್ಗಳಿಗೂ ಒಯ್ಯಲಿದ್ದೇವೆ. ಮೊಬೈಲ್ ವ್ಯಾಕ್ಸಿನೇಷನ್ ವ್ಯಾನ್ ಮೂಲಕ ಕ್ಲಸ್ಟರ್ನಲ್ಲಿ ಜನರಿಗೆ ಲಸಿಕೆ ಹಾಕಿಸಲಿದ್ದೇವೆ. ಪ್ರತಿ ಭಾನುವಾರವೂ ಈ ಸೌಲಭ್ಯ ದೊರಕಲಿವೆ. ಅಗತ್ಯವಿದ್ದರೆ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ ಎಂದಿದ್ದಾರೆ.</p>.<p>ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು,ಮುಂದಿನ ದಿನಗಳಲ್ಲಿ18-44 ವರ್ಷ ವಯೋಮಾನದ ಜನರಿಗೂ ಲಸಿಕೆ ಹಾಕಿಸಿಕೊಳ್ಳಲಾಗುವುದು ಎಂದು ಗಂಭೀರ್ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸೋಮವಾರದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಉಚಿತ ಲಸಿಕೆ ಶಿಬಿರಗಳನ್ನು ಪ್ರಾರಂಭಿಸಲಿದ್ದಾರೆ.</p>.<p>ಗೌತಮ್ ಗಂಭೀರ್ ಫೌಂಡೇಷನ್ ಮಾಹಿತಿ ಪ್ರಕಾರ, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲಾಗುವುದು. ಅದರಿಂದಲೇ ಎಲ್ಲ ಖರ್ಚುಗಳನ್ನು ಭರಿಸಲಾಗುವುದು ಎಂದಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾವು ಸೋಮವಾರದಿಂದ ಕೋವಿಡ್ ಉಚಿತ ವ್ಯಾಕ್ಸಿನೇಷನ್ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ದೆಹಲಿಯ ಜನತೆಗೆ ಸಂಪೂರ್ಣವಾಗಿ ಲಸಿಕೆ ಲಭ್ಯವಾಗುವ ವರೆಗೂ ನಾವು ಈ ಶಿಬಿರಗಳನ್ನು ಮುಂದುವರಿಸುತ್ತೇವೆ. ನಮ್ಮ ಸಹಾಯಾರ್ಥ ಸಂಸ್ಥೆಯು ಈ ಹಿಂದೆಯೂ ಜನರಿಗೆ ನೆರವಾಗಿದ್ದು, ದೆಹಲಿ ಜನತೆಯ ಪ್ರಾಣ ಉಳಿಸುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/delhi-markets-to-open-on-odd-even-basis-from-monday-metro-to-run-at-50-pc-capacity-arvind-kejriwal-836209.html" itemprop="url">ದೆಹಲಿಯಲ್ಲಿ ಲಾಕ್ಡೌನ್ ಸಡಿಲಿಕೆ: ಸಮ–ಬೆಸ ಸಂಖ್ಯೆಯಲ್ಲಿ ತೆರೆಯಲು ಅವಕಾಶ </a></p>.<p>ಸ್ಲಮ್ ಕ್ಲಸ್ಟರ್ಗಳಲ್ಲೂ ಶಿಬಿರಗಳನ್ನು ಪ್ರಾರಂಭಿಸಲಾಗುವುದು ಎಂದು ಗಂಭೀರ್ ತಿಳಿಸಿದ್ದಾರೆ.</p>.<p>ನಾವು ವ್ಯಾಕ್ಸಿನೇಷನ್ ಶಿಬಿರಗಳನ್ನು ವಿಸ್ತರಿಸಲಿದ್ದೇವೆ. ಅದನ್ನು ಕ್ಲಸ್ಟರ್ಗಳಿಗೂ ಒಯ್ಯಲಿದ್ದೇವೆ. ಮೊಬೈಲ್ ವ್ಯಾಕ್ಸಿನೇಷನ್ ವ್ಯಾನ್ ಮೂಲಕ ಕ್ಲಸ್ಟರ್ನಲ್ಲಿ ಜನರಿಗೆ ಲಸಿಕೆ ಹಾಕಿಸಲಿದ್ದೇವೆ. ಪ್ರತಿ ಭಾನುವಾರವೂ ಈ ಸೌಲಭ್ಯ ದೊರಕಲಿವೆ. ಅಗತ್ಯವಿದ್ದರೆ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ ಎಂದಿದ್ದಾರೆ.</p>.<p>ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು,ಮುಂದಿನ ದಿನಗಳಲ್ಲಿ18-44 ವರ್ಷ ವಯೋಮಾನದ ಜನರಿಗೂ ಲಸಿಕೆ ಹಾಕಿಸಿಕೊಳ್ಳಲಾಗುವುದು ಎಂದು ಗಂಭೀರ್ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>