ಈ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾವು ಸೋಮವಾರದಿಂದ ಕೋವಿಡ್ ಉಚಿತ ವ್ಯಾಕ್ಸಿನೇಷನ್ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ದೆಹಲಿಯ ಜನತೆಗೆ ಸಂಪೂರ್ಣವಾಗಿ ಲಸಿಕೆ ಲಭ್ಯವಾಗುವ ವರೆಗೂ ನಾವು ಈ ಶಿಬಿರಗಳನ್ನು ಮುಂದುವರಿಸುತ್ತೇವೆ. ನಮ್ಮ ಸಹಾಯಾರ್ಥ ಸಂಸ್ಥೆಯು ಈ ಹಿಂದೆಯೂ ಜನರಿಗೆ ನೆರವಾಗಿದ್ದು, ದೆಹಲಿ ಜನತೆಯ ಪ್ರಾಣ ಉಳಿಸುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.