ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಪ್ರಶಾಂತ ಭೂಷಣ್, ‘ಇದು ಲಸಿಕೆ ವಿರೋಧಿ ಅರ್ಜಿಯಲ್ಲ. ಹಾಗೆಯೇ, ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನ ನಿಲ್ಲಿಸುವ ಪ್ರಯತ್ನವೂ ಅಲ್ಲ. ಬದಲಿಗೆ, ಲಸಿಕೆ ಹಾಕುವ ವಿಷಯದಲ್ಲಿ ಪಾರದರ್ಶಕತೆ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆಯ ಪ್ರಾಯೋಗಿಕ ದತ್ತಾಂಶಗಳನ್ನು ಬಹಿರಂಗಪಡಿಸುವುದರಿಂದ ಜನರಲ್ಲಿರುವ ಅನುಮಾನವನ್ನು ನಿವಾರಿಸಿದಂತಾಗುತ್ತದೆ’ಎಂದು ಹೇಳಿದರು.