ಕಾಸರಗೋಡು: ಇಲ್ಲಿನ ಕುಂಬಳೆ ಸಮೀಪದ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇಗುಲದ ಕೆರೆಯಲ್ಲಿನ ಮೊಸಳೆ‘ಬಬಿಯಾ’ ಮಂಗಳವಾರ ರಾತ್ರಿ ಗರ್ಭಗುಡಿ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುವ ‘ಬಬಿಯಾ’ಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆದರೆ, ಕೆರೆಯಿಂದ ಹೊರಬಂದ ಬಬಿಯಾ ದೇಗುಲದ ಆವರಣ ಪ್ರವೇಶಿಸಿರುವುದು ಅಚ್ಚರಿಗೆಕಾರಣವಾಗಿದೆ.
ಮೊಸಳೆಯು ದೇಗುಲದ ಆವರಣ ಪ್ರವೇಶಿಸಿರುವುದು ಇದೇ ಮೊದಲು ಎಂದೂ ದೇಗುಲದ ಮೂಲಗಳು ತಿಳಿಸಿವೆ.