ಮುಂಬೈ: ‘ತೌತೆ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದರಲ್ಲಿ ಸಿಲುಕಿದ್ದ 177 ಮಂದಿಯನ್ನು ಭಾರತೀಯ ನೌಕಾಪಡೆಯು ರಕ್ಷಿಸಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
‘ನೈರುತ್ಯ ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ಹೀರಾ ಆಯಿಲ್ ಫೀಲ್ಡ್ನಲ್ಲಿ 273 ಸಿಬ್ಬಂದಿಯನ್ನೊಳಗೊಂಡ ಪಿ305 ದೋಣಿಯು ಸಿಲುಕಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನೌಕಾಪಡೆಗಳನ್ನು ನಿಯೋಜನೆ ಮಾಡಲಾಯಿತು’ ಎಂದು ಅವರು ಹೇಳಿದರು.
ಸೋಮವಾರ ರಾತ್ರಿ 11 ಗಂಟೆವರೆಗೆ 60 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಮೂವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ, ಐಎನ್ಎಸ್ ಶಿಕಾರ್ಗೆ ಕರೆತರಲಾಗಿತ್ತು.