ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕೋವಿಡ್‌ ಪೀಡಿತ ಹಿರಿಯ ನಾಗರಿಕರ ನೆರವಿಗೆ ತಂಡ ರಚನೆ

Last Updated 16 ಮೇ 2021, 7:56 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ನಿಂದ ಬಳಲುತ್ತಿರುವ ಹಿರಿಯ ನಾಗರಿಕರು ತೊಂದರೆ ಎದುರಿಸುತ್ತಿರುವ ಸಂದರ್ಭದಲ್ಲಿ, ಅವರಿಗೆ ಸ್ಪಂದಿಸುವ ಸಲುವಾಗಿ ದೆಹಲಿಯ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಿ.ಸಿ.ಮೀನಾ, ಹಿರಿಯ ಸಹಾಯಕ ಕುಮಾರ ಗಂಧರ್ವ, ಕಲ್ಯಾಣಾಧಿಕಾರಿಗಳಾದ ಕುಲದೀಪ್‌ ಸೈನಿ ಹಾಗೂ ವಿಜಯ್ ಈ ತಂಡದಲ್ಲಿದ್ದಾರೆ. ಈ ತಂಡ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ)ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಸಹಾಯವಾಣಿಯನ್ನು ಸಹ (1077) ಸ್ಥಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆಹಾರ ಪೊಟ್ಟಣ ವಿತರಣೆ, ವಸತಿ ಕಲ್ಪಿಸುವುದು, ಔಷಧಿ ತಲುಪಿಸುವುದು, ಮಾಸ್ಕ್‌, ಸ್ಯಾನಿಟೈಜರ್‌ನಂತಹ ಕೋವಿಡ್‌–19ಗೆ ಸಂಬಂಧಿಸಿದ ಪರಿಕರಗಳನ್ನು ಹಿರಿಯ ನಾಗರಿಕರಿಗೆ ತಲುಪಿಸಲು ಸಹ ಈ ಅಧಿಕಾರಿಗಳು ನೆರವಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT